ಮುಂಡಗೋಡ: ಬೀದಿ ಬೀದಿ ಅಲೆದು ಭಿಕ್ಷೆ ಬೇಡುವ ಮಂಗಳಮುಖಿಯರ ತಂಡವೊoದು ಕಾಸು ಕೊಡದ ಕಾರಣ ಅಂಗಡಿಯೊoದರ ಗಾಜುಗಳನ್ನು ಒಡೆದಿದ್ದಾರೆ. ಜೊತೆಗೆ ಅಂಗಡಿ ಮಾಲಕ ಹಾಗೂ ಅಲ್ಲಿದ್ದ ಪುಟ್ಟ ಕಂದಮ್ಮನಿಗೆ ಥಳಿಸಿ ಗಾಯಗೊಳಿಸಿದ್ದಾರೆ.
ನ 23ರಂದು ಹುಬ್ಬಳ್ಳಿಯ ಆರು ಮಂಗಳಮುಖಿಯರ ತಂಡ ಮುಂಡಗೋಡಿಗೆ ಆಗಮಿಸಿದೆ. ಕಂಡ ಕಂಡವರ ಬಳಿ ಕಾಸು ಕೀಳುತ್ತಿದ್ದ ಮಂಗಳಮುಖಿಯರು ಕಡಿಮೆ ಕಾಸು ಕೊಟ್ಟವರನ್ನು ನಿಂದಿಸುತ್ತಿರುವ ಬಗ್ಗೆಯೂ ಜನ ದೂರಿದ್ದಾರೆ. ಶಿವಾಜಿ ಸರ್ಕಲ್ ಬಳಿಯ ಅಂಗಡಿಯೊoದಕ್ಕೆ ತೆರಳಿದ ಮಂಗಳಮುಖಿಯರಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ರಾಜೇಶ್ ಅವರು ಮುಂದೆ ಹೋಗುವಂತೆ ಕೈ ಸನ್ನೆ ಮೂಲಕ ಸೂಚಿಸಿದ್ದಾರೆ. ಅದಾಗಿಯೂ ಅಲ್ಲಿಯೇ ಇದ್ದ ಕಾರಣ ಅವರಿಗೆ ಕಾಸು ಕೊಡಲು ನಿರಾಕರಿಸಿದ್ದಾರೆ.
ಇದರಿಂದ ಸಿಟ್ಟಾದ ಮಂಗಳಮುಖಿಯರು ರಾಜೇಶ್ ಅವರ ತಲೆಮೇಲೆ ಕುಟ್ಟಿದ್ದಾರೆ. ಜೊತೆಗೆ ಅಂಗಡಿಯ ಗ್ಲಾಸುಗಳನ್ನು ಒಡೆದು ಪುಡಿ ಮಾಡಿದ್ದಾರೆ. ಅಂಗಡಿಯಲ್ಲಿದ್ದ ಚಾಕ್ಲೇಟ್ ಬಾಕ್ಸುಗಳನ್ನು ಬಿಸಾಡಿದ್ದಾರೆ. ಆರು ಜನ ಗುಂಪು ಕಟ್ಟಿಕೊಂಡು ಬಂದು ರಾಜೇಶ್ ಅವರನ್ನು ಥಳಿಸಿದ್ದು, ಅಲ್ಲಿದ್ದ ಪುಟ್ಟ ಮಗುವಿನ ಮೇಲೆಯೂ ದಬ್ಬಾಳಿಕೆ ನಡೆಸಿದ್ದಾರೆ.
ಮಂಗಳಮುಖಿಯರ ದೌರ್ಜನ್ಯದಿಂದ ಮಗುವಿನ ಮುಖಕ್ಕೆ ತೆರಚಿದ ಗಾಯವಾಗಿದೆ. ತಲೆಗೆ ಪೆಟ್ಟಾಗಿದೆ. ತಕ್ಷಣ ಅಲ್ಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬರುವುದನ್ನು ನೋಡಿ ಮಂಗಳಮುಖಿಯರು ಪರಾರಿಯಾಗಿದ್ದಾರೆ. ಜನರ ಆಕ್ರೋಶಕ್ಕೆ ಮಣಿದ ಪೊಲೀಸರು ಆ ಆರು ಜನರನ್ನು ಹುಡುಕಿ ಬೆಂಡೆತ್ತಿದ್ದಾರೆ.
ಭಿಕ್ಷಾಟನೆ ಕಾನೂನು ಪ್ರಕಾರ ಅಪರಾಧ: ಭಿಕ್ಷÄಕರಿಗೆ ನೀಡುವ ಕಾಸು ಅವರ ದುಶ್ಚಟಕ್ಕೆ ಕಾರಣ





