ಸಿದ್ದಾಪುರ: ತಂದೆ ಬೈಗುಳಕ್ಕೆ ಬೆದರಿದ ಗೌರಿ ಬೇಸ್ತ (25) ರಾತ್ರಿ ವೇಳೆ ಮನೆ ಬಿಟ್ಟು ಹೋಗಿದ್ದು, ಇಡೀ ಕುಟುಂಬದವರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾರೆ.
ಸಿದ್ದಾಪುರ ಹೊಸೂರು ಜನತಾ ಕಾಲೋನಿಯ ಜ್ಞಾನದೇವ ಬೇಸ್ತಾ ಅವರ ಮನೆಯಲ್ಲಿ ನ 21ರ ಸಂಜೆ 7 ಗಂಟೆಗೆ ಜಗಳವಾಗಿತ್ತು. ಜ್ಞಾನದೇವ ಬೇಸ್ತಾ ಅವರು ತಮ್ಮ ಪತ್ನಿ ಹಾಗೂ ಮಗನಿಗೆ ಬೈದಿದ್ದರು. ಈ ವೇಳೆ ಮಗಳು ಗೌರಿ ಬೇಸ್ತಾ ಅವರಿಗೂ ಬುದ್ದಿಮಾತು ಹೇಳಿದ್ದರು. `ಹೆಣ್ಣು ಮಕ್ಕಳು ಹಾಗೆಲ್ಲ ಸಿಟ್ಟು ಮಾಡಿಕೊಳ್ಳಬಾರದು. ಕುಟುಂಬದವರೊoದಿಗೆ ಚನ್ನಾಗಿರಬೇಕು’ ಎಂದಿದ್ದರು.
ತoದೆ ಮಾತಿಗೆ ಗೌರಿ ಬೇಸ್ತಾ ಎದುರುತ್ತರ ನೀಡಿದಾಗ ಜ್ಞಾನದೇವ ಬೇಸ್ತಾ ಅವರು ಗದರಿಸಿದ್ದರು. ಆಗ ಏಕಾಏಕಿ ಏರುಧ್ವನಿಯಲ್ಲಿ ಕೂಗಾಡಿದ ಗೌರಿ 8 ಗಂಟೆ ವೇಳೆಗೆ ಬ್ಯಾಗಿನಲ್ಲಿ ಬಟ್ಟೆ ತುಂಬಿಕೊoಡು ಮನೆ ಬಿಟ್ಟು ಹೋದರು. ಈ ರಾತ್ರಿ ಒಂಟಿ ಹೆಣ್ಣು ಮಗಳು ಎಲ್ಲಿ ಹೋದಳು? ಈಗ ಎಲ್ಲಿದ್ದಾಳೆ? ಹೇಗಿದ್ದಾಳೆ? ಎಂದು ಪಾಲಕರಿಗೆ ಗೊತ್ತಿಲ್ಲ. ಗೌರಿ ಬೇಸ್ತಾರ ಮೊಬೈಲ್’ಗೆ ಫೋನ್ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಸಂಬoಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಹಿನ್ನಲೆ ಜ್ಞಾನೇಶ್ವರ ಬೇಸ್ತಾ ಅವರು ಪೊಲೀಸ್ ದೂರು ನೀಡಿದ್ದು, `ಮಗಳನ್ನು ಹುಡುಕಿಕೊಡಿ’ ಎಂದು ಮನವಿ ಮಾಡಿದ್ದಾರೆ.




