ಹಳಿಯಾಳ: ಭಜಂತ್ರಿಗಲ್ಲಿಯ ಕಾಶವ್ವ ವಡ್ಡರ್ (20) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾಶವ್ವ ವಡ್ಡರ್ ಹುಬ್ಬಳ್ಳಿಯಲ್ಲಿ ನರ್ಸಿಂಗ್ ಓದುತ್ತಿದ್ದರು. ಅತ್ಯಂತ ಸೂಕ್ಷ್ಮ ಸ್ವಭಾವದವರಾಗಿದ್ದ ಅವರು ಸಣ್ಣ ಪ್ರಮಾಣದಲ್ಲಿ ನಿಂದಿಸಿದರೂ ನೊಂದುಕೊಳ್ಳುತ್ತಿದ್ದರು. ನ 22ರಂದು ಮನೆಯಲ್ಲಿದ್ದ ಅವರು ಕೊಣೆಯಲ್ಲಿದ್ದ ಸ್ಲಾಪಿನ ಹುಕ್ಕಿಗೆ ಸೀರೆ ಕಟ್ಟಿ ಕುತ್ತಿಗೆಗೆ ಕುಣಿಕೆ ಹಾಕಿಕೊಂಡಿದ್ದಾರೆ.
ಕಾಶವ್ವ ವಡ್ಡರ್ ಜೋತಾಡುತ್ತಿರುವುದನ್ನು ನೋಡಿದ ಮನೆಯವರು ತಕ್ಷಣ ದೇಹವನ್ನು ಕೆಳಗಿಳಿಸಿ ಉಪಚರಿಸಿದ್ದಾರೆ. ನಂತರ ರಿಕ್ಷಾ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಕಾಶವ್ವ ಸಾವನಪ್ಪಿದ ಬಗ್ಗೆ ಘೋಷಿಸಿದರು. ಪೊಲೀಸ್ ಪ್ರಕರಣ ದಾಖಲಿಸಿದ ಸುರೇಶ ವಡ್ಡರ್ ಮಗಳ ಶವ ಪಡೆದರು.




