ಭಟ್ಕಳ: ಮುರುಡೇಶ್ವರ ಬಳಿಯ ತೊದಲ್ಲಿಯ ವೀರಮಾಸ್ತಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಚಲಿಸಿಕೊಂಡು ಹೋಗುತ್ತಿದ್ದ ಯೋಗೇಶ ಮೊಗೇರ್’ರನ್ನು ಎಳೆದಾಡಿದ ನಾಲ್ವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ನ 24ರಂದು ಬೈಲೂರು ತೊದಲ್ಲಿ ಬಲೀಂದ್ರಮನೆಯ ಆಟೋ ಚಾಲಕ ರವಿ ಮೊಗೇರ್ ವೀರಮಾಸ್ತಿ ದೇವಸ್ಥಾನದ ಬಳಿ ತೆರಳಿದ್ದರು. ಅಲ್ಲಿನ ರವಿ ಮೊಗೇರ ಅವರ ಬಾವಿ ಹತ್ತಿರ ಯೋಗೇಶ ಮೊಗೇರ್ ರಿಕ್ಷಾ ಓಡಿಸುತ್ತಿದ್ದಾಗ ನಾಲ್ವರು ಅಡ್ಡಗಟ್ಟಿದರು. ಬೈಲೂರಿನ ಹರ್ಷ ಮೊಗೇರ, ಗಜಾನನ ಮೊಗೇರ, ಪ್ರಮೋದ ನಾಯ್ಕ ಹಾಗೂ ರಾಮ ಮೊಗೇರ್ ಸೇರಿ ಯೋಗೇಶ್ ಅವರನ್ನು ಥಳಿಸಿದರು.
ಈ ನಾಲ್ವರು ಸೇರಿ ಯೋಗೇಶ ಮೊಗೇರ್ ಅವರ ಎದೆ, ಬೆನ್ನು, ಮುಖಕ್ಕೆ ಹೊಡೆದು ಗಾಯ ಮಾಡಿದರು. ಈ ವೇಳೆ ಹರ್ಷ ಮೊಗೇರ್ ಅಲ್ಲಿದ್ದ ಕಟ್ಟಿಗೆಯಿಂದ ಮುಖಕ್ಕೆ ಬಡಿದರು. ಪರಿಣಾಮ ರಿಕ್ಷಾ ಚಾಲಕ ಯೋಗೇಶ್ ಮೊಗೇರ್ ಆಸ್ಪತ್ರೆಗೆ ದಾಖಲಾದರು. ಇದೀಗ ಚೇತರಿಸಿಕೊಂಡ ಅವರು ನಾಲ್ವರ ವಿರುದ್ಧ ಪೊಲೀಸ್ ದೂರು ನೀಡಿದ್ದು, `ಮತ್ತೆ ತಂಟೆಗೆ ಬಂದರೆ ಹುಷಾರು’ ಎಂದು ಬೆದರಿಸಿದ ಬಗ್ಗೆಯೂ ಆರೋಪಿಸಿದ್ದಾರೆ.
ಈ ಹೊಡೆದಾಟದ ಕಾರಣದ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.




