ಭಟ್ಕಳ: ಮುರುಡೇಶ್ವರ ಬಳಿಯ ತೊದಲ್ಲಿ ಬಳಿ ಆಟೋ ಚಾಲಕ ಹಾಗೂ ಬೈಕ್ ಸವಾರ ನಡುವೆ ಹೊಡೆದಾಟ ನಡೆದಿದೆ. ಈ ಬಗ್ಗೆ ಆಟೋ ಚಾಲಕ ಯೊಗೇಶ ಮೊಗೇರ್ ನಾಲ್ವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಪ್ರಸ್ತುತ ಯೊಗೇಶ್ ಮೊಗೇರ್ ವಿರುದ್ಧವೂ ಗಜಾನನ ಮೊಗೇರ್ ಪ್ರತಿ ದೂರು ನೀಡಿದ್ದಾರೆ.
`ತನ್ನ ಕುಟುಂಬದ ಮೇಲೆ ಯೊಗೇಶ್ ಮೊಗೇರ್ ಕಳೆದ ಒಂದು ತಿಂಗಳಿನಿoದ ಹಗೆ ಸಾಧಿಸುತ್ತಿದ್ದ. ತನ್ನ ಮಗ ಹರ್ಷನನ್ನು ಕಂಡಾಗಲೆಲ್ಲ ಗುರಾಯಿಸುತ್ತಿದ್ದ. ನ 12ರಂದು ಹರ್ಷ ಮೊಗೇರ್ ತೊದಲ್ಲಿಯ ರವಿ ಮೊಗೇರ್ ಅವರ ಮನೆ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಯೊಗೇಶ ಮೊಗೇರ್ `ರಸ್ತೆ ಏನು ನಿನ್ನ ಅಪ್ಪಂದಾ?’ ಎಂದು ಪ್ರಶ್ನಿಸಿದ್ದ. `ಸುಮ್ಮನೆ ಬೈಯ್ಯಬೇಡ’ ಎಂದಿದ್ದಕ್ಕೆ ಹರ್ಷನ ಮೇಲೆ ಹಲ್ಲೆ ನಡೆಸಿದ’ ಎಂದು ಗಜಾನನ ಮೊಗೇರ್ ದೂರಿದ್ದಾರೆ.
ಇದನ್ನು ಓದಿ: ರಿಕ್ಷಾ ಚಾಲಕನ ಮೇಲೆ ಹಲ್ಲೆ
`ಹರ್ಷ ಮೊಗೇರ್ ಅಂದು ಮದುವೆಗೆ ಹೋಗುವ ತಯಾರಿಯಲ್ಲಿದ್ದರು. ಸ್ನೇಹಿತನಿಗಾಗಿ ಕಾಯುತ್ತಿದ್ದರು. ಈ ವೇಳೆ ಹರ್ಷನ ಕೆನ್ನೆ, ಮುಖಕ್ಕೆ ಹೊಡೆದು ಗಾಯಗೊಳಿಸಲಾಗಿದೆ’ ಎಂದು ದೂರಿದ್ದಾರೆ. ಬೈಲೂರಿನ ರಿಕ್ಷಾ ಚಾಲಕ ಯೊಗೇಶ ಮೊಗೇರ್ `ನಿನ್ನ ಜೊತೆ ನಿನ್ನ ಅಪ್ಪನನ್ನು ಕೊಲೆ ಮಾಡುವೆ’ ಎಂದು ಬೆದರಿಕೆ ಹಾಕಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.




