ಮುಂಡಗೋಡು: ಮೂರು ವರ್ಷದಿಂದ ಪಿಡ್ಸ ಹಾಗೂ ಲಿವರ್ ಹಾಗೂ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಪೌರ ಕಾರ್ಮಿಕ ಗಣೇಶ ಚಲವಾದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
30 ವರ್ಷದ ಗಣೇಶ ಚಲವಾದಿ ಗಾಂಧೀನಗರದಲ್ಲಿ ವಾಸವಾಗಿದ್ದರು. ತಮಗಿದ್ದ ರೋಗಗಳಿಂದ ಅವರು ಬೇಸತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಬಂದಿರುವ ಬಗ್ಗೆ ಅವರು ತಾಯಿ ಬಸಣ್ಣೇವ್ವ ಚಲವಾದಿ ಅವರ ಬಳಿಯೂ ಹೇಳಿಕೊಂಡಿದ್ದರು.
ಮಂಗಳವಾರ ಬೆಳಗ್ಗೆ ಮನೆಯಲ್ಲಿದ್ದ ಅವರು ಮಧ್ಯಾಹ್ನ 4 ಗಂಟೆ ವೇಳೆಗೆ ಶವವಾಗಿದ್ದಾರೆ. ಮನೆಗೆ ಹೊದಸಿದ ಅಡ್ಡ ಕಬ್ಬಿಣಕ್ಕೆ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡರು.




