ಕುಮಟಾ: ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಮಣ್ಣು ಕೊರೆತ. ಅದಾಗಿಯೂ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇನ್ನಷ್ಟು ಗುಡ್ಡ ಕೊರೆಯುವ ಕೆಲಸ ನಡೆದಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಇಲ್ಲಿನ ಧರೆಯೂ ಕುಸಿಯುವ ಆತಂಕ ವ್ಯಕ್ತವಾಗಿದೆ.
ಉಮಾಮಹೇಶ್ವರ ಮಂದಿರಕ್ಕೆ ತೆರಳುವ ರಸ್ತೆ ಬಳಿ ಒಂದು ಎಕರೆ ಜಾಗದಲ್ಲಿ ಅವೈಜ್ಞಾನಿಕ ಪದ್ಧತಿಯಲ್ಲಿ ಗುಡ್ಡ ಕೊರೆಯಲಾಗುತ್ತಿದೆ. ಸ್ಥಳೀಯ ಪರಿಸರದ ಬಗ್ಗೆ ಅರಿವಿಲ್ಲದವರು ರೆಸಾರ್ಟ ನಿರ್ಮಾಣ ಕಾರ್ಯಕ್ಕಾಗಿ ಗುಡ್ಡ ಕೊರೆಯುತ್ತಿದ್ದಾರೆ. ಆದರೆ, ಮಣ್ಣು ಸಾಗಾಟ ಹಾಗೂ ಮರ ಕಡಿತಕ್ಕೆ ಪರವಾನಿಗೆ ಪಡೆದಿಲ್ಲ.
ಇಲ್ಲಿನ ಗುಡ್ಡ ಕಡಿತದಿಂದ ತಳಭಾಗದಲ್ಲಿ ವಾಸಿಸುತ್ತಿರುವವರಿಗೆ ಅಪಾಯ ಹೆಚ್ಚಿದೆ. ಹೀಗಾಗಿ ಅಲ್ಲಿನವರು ಅವೈಜ್ಞಾನಿಕ ಕೆಲಸ ನಡೆಸದಂತೆ ತಿಳಿ ಹೇಳಿದ್ದಾರೆ. ಅದಾಗಿಯೂ ಗುಡ್ಡ ಕೊರೆತ ಮುಂದುವರೆದಿದೆ. ಖಾಸಗಿ ಜಾಗದ ಜೊತೆ ಅಕ್ಕಪಕ್ಕದ ಜಾಗವೂ ಅತಿಕ್ರಮಣವಾದ ಬಗ್ಗೆ ಅಲ್ಲಿನವರು ದೂರಿದ್ದಾರೆ.




