ಭಟ್ಕಳ: ಮನೆ ಬಾಡಿಗೆ ನೀಡುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿದ್ದು ಎರಡು ಬಣದವರ ನಡುವೆ ಹೊಡೆದಾಟ ನಡೆದಿದೆ.
ಮುಟ್ಟಳ್ಳಿಯ ರೈಲ್ವೆ ಆರ್ ಪಿ ಎಫ್ ಕಚೇರಿ ಬಳಿ ವಾಸವಾಗಿರುವ ಈಶ್ರತ್ ಜಹಾನ್ ಎಂಬ ಮಹಿಳೆ ಮುಗಳಿಹೊಂಡದ ರಿಜ್ವಾನ್ ಅಬ್ದುಲ್ ರಿಷಾದ್ ಅವರಲ್ಲಿನ ಮನೆ ಬಾಡಿಗೆಯ ಬಾಕಿ ಹಣ ಕೇಳಿದ್ದರು. ಆಗ `ಮನೆ ಖಾಲಿ ಮಾಡುವೆ’ ಎಂದು ರಿಜ್ವಾನ್ ಹೇಳಿದ್ದರು.
ನ 28ರಂದು ಈಶ್ರತ್ ಜಹಾನ್ ಆಸ್ಪತ್ರೆಯಿಂದ ಮರಳುವಾಗ ಅಲ್ಲಿ ಎದುರಾದ ರಿಜ್ವಾನ್ ಅಬ್ದುಲ್ ರಿಷಾದ್ ಹಾಗೂ ಆತನ ಸಹಚರರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಅಬ್ದುಲ್ ವಾಹಿದ್ ಮೇಲೆ ಹಲ್ಲೆ ನಡೆಸಿದರು.
ಇದಾದ ನಂತರ ಈಶ್ರತ್ ಜಹಾನ್ ಅವರ ಮನೆಗೆ ನುಗ್ಗಿ ಅಲ್ಲಿ ಮಲಗಿದ್ದ ಈಶ್ರತ್ ಅವರ ಪತಿ ಅಬ್ದುಲ್ ಸಲಾಂ’ಗೆ ಕಾಲಿನಿಂದ ತುಳಿದರು. ನಂತರ ಅಬ್ದುಲ್ ಅವರಿಗೆ ಚಾಕು ಇರಿದರು. ಜೊತೆಗೆ ಅಲ್ಲಿದ್ದ ಈಶ್ರತ್ ಅವರ ಮಗ ಅಬ್ದುಲ್ ರಯಾನ್ ಮೇಲೆಯೂ ಆಕ್ರಮಣ ನಡೆಸಿದರು.
ಜೊತೆಗೆ ಈಶ್ರತ್ ಅವರನ್ನು ದೂಡಿ ಅವಮಾನ ಮಾಡಿದ್ದು, ಈ ಕೃತ್ಯ ಎಸಗಿದ ರಿಜ್ವಾನ್ ಅಬ್ದುಲ್ ರಿಷಾದ್ ಹಾಗೂ ಆತನ ಸಹಚರರಾದ ಜಾಪರ್ ಅಬ್ಬಾಸ್, ರಫಿಕ್ ಚೌತನಿ, ಅಲಿಯಾ ಜಾಫರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.




