ಭಟ್ಕಳ: ಮುರುಡೇಶ್ವರ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ರಾಜಸ್ಥಾನದ ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್ ಖಾನ್ ಕೊಂಕಣ ರೈಲಿನಲ್ಲಿ ಚಲಿಸುತ್ತಿರುವಾಗ ರೈಲಿನಿಂದ ಕೆಳಗೆ ಬಿದ್ದಿದ್ದರು. ನ 25ರ ರಾತ್ರಿ ತಂದೆ ತಾಯಿಯೊಂದಿಗೆ ರಾಜಸ್ಥಾನದ ಕೋಟ ಜಂಕ್ಷನನಿoದ ಕೇರಳ ರಾಜ್ಯದ ಕಣ್ಣೂರಿಗೆ ಅಮೃತಸರ್ ಕುಚೇವೆಲ್ಲಿ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಮುರುಡೇಶ್ವರದ ಬಳಿ ಅವಘಡ ನಡೆದಿತ್ತು.
ಮುರುಡೇಶ್ವರ ಆರ್ ಎನ್ ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ನಂತರ ಮಂಗಳೂರು ಜಿಲ್ಲಾ ಆಸ್ಪತ್ರೆ ವೆನ್ಲಾಕ್’ಗೆ ಸಾಗಿಸಲಾಗಿದ್ದು, ಗುರುವಾರ ರಾತ್ರಿ ಅವರು ಸಾವನಪ್ಪಿದರು.




