ಕುಮಟಾ: ಗೋಕರ್ಣ ಬಳಿಯ ದುಬ್ಬಿನಸಸಿ ಗ್ರಾಮದ ಮೇರಾಕಿ ಬೀಚ್ ರೆಸಾರ್ಟ’ನ ಪಕ್ಕದ ಖಾಲಿ ಜಾಗದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದ ರೆಸಾರ್ಟ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಹಸಿರುಬೈಲಿನ ಜಯಂತ ಮರಾಠಿ ಮೇರಾಜಿ ಬೀಚ್ ರೆಸಾರ್ಟಿನಲ್ಲಿ ಮ್ಯಾನೇಜರ್ ಆಗಿದ್ದಾರೆ. ಭಾನುವಾರ ರಾತ್ರಿ ಅವರು ಅಲ್ಲಿ ಬಂದಿದ್ದ ಗ್ರಾಹಕರಿಗೆ ಸರಾಯಿ ಸರಬರಾಜು ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
ರೆಸಾರ್ಟ ಪಕ್ಕದ ಖಾಲಿ ಜಾಗದಲ್ಲಿ ಜಯಂತ ಮರಾಠಿ ಬಗೆ ಬಗೆಯ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಈ ಬಗ್ಗೆ ಗೋಕರ್ಣ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತು. ಪೊಲೀಸ್ ಉಪನಿರೀಕ್ಷಕ ಶಶಿಧರ ಕೆ ಎಚ್ ಅಲ್ಲಿ ದಾಳಿ ಮಾಡಿದರು.
ಮೂರು ಬಗೆಯ ಮದ್ಯದ ಬಾಟಲಿ ಜೊತೆ ಖಾಲಿ ಬಾಟಲಿಗಳನ್ನು ಸಹ ಅವರು ಸಾಕ್ಷಿಗಾಗಿ ಸಂಗ್ರಹಿಸಿದರು. ಜಯಂತ ಮರಾಠಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.




