ಶಿರಸಿ: ಎಡಗಾಲಿನ ಅಂಗವಿಕಲತೆಯಿoದ ಬಳಲುತ್ತಿದ್ದ ಗಣಪತಿ ಸಿದ್ದಿ ಕಾಲು ಎಡವಿ ಬಿದ್ದು ಸಾವನಪ್ಪಿದ್ದಾರೆ.
ಶಿರಸಿ ತಾಲೂಕಿನ ಕಕ್ಕಳ್ಳಿ ಕಾನಬಾಗಿಲುವಿನಲ್ಲಿ ವಾಸವಾಗಿದ್ದ ಗಣಪ ನಾಗು ಸಿದ್ದಿ (65) ಅಂಗವಿಕಲರು. ಅವರ ಕಾಲು ಸರಿಯಿಲ್ಲದ ಕಾರಣ ದೊಡ್ಡ ಪ್ರಮಾಣದ ಕೆಲಸ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಐದಾರು ವರ್ಷದಿಂದ ಅಧಿಕ ರಕ್ತದೊತ್ತಡ ಕಾರಣದಿಂದ ಅವರು ಬಳಲಿದ್ದರು. ಡಿಸೆಂಬರ್ 4ರಂದು ಮನೆ ಕೆಲಸ ಮುಗಿಸಿ ಕೈ-ಕಾಲು ತೊಳೆಯುವುದಕ್ಕಾಗಿ ಶೌಚಾಲಯಕ್ಕೆ ಹೋದ ಅವರು ಕಾಲು ಎಡವಿ ನೆಲಕ್ಕೆ ಬಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಗಣಪರನ್ನು ಅವರನ್ನು ನೋಡಿದ ಅವರ ಪತ್ನಿ ಲಕ್ಷಿö್ಮÃ ಸಿದ್ದಿ ಕಕ್ಕಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿನ ವೈದ್ಯರು ಗಣಪತಿ ಸಿದ್ದಿ ಈಗಾಗಲೇ ಸಾವನಪ್ಪಿದ ಬಗ್ಗೆ ಘೋಷಿಸಿದರು.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕುಟುಂಬದವರು ಶವ ಪಡೆದರು.




