ಶಿರಸಿ: ಶೌಚಾಲಯದ ಒಳಗೆ ಅಡಗಿ ಕೂತಿದ್ದ ನಾಗರಹಾವನ್ನು ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.
ಶಿರಸಿ ನಾರಾಯಣಗುರು ನಗರಕ್ಕೆ ಬಂದ ನಾಗರಹಾವು ಉಮೇಶ ಬಂಕಾಪುರ ಅವರ ಮನೆ ಹಿಂದಿನ ಶೌಚಾಲಯದಲ್ಲಿ ಅಡಗಿತ್ತು. ಗುರುವಾರ ಹಾವು ನೋಡಿದ ಕುಟುಂಬದವರು ಕಕ್ಕಾಬಿಕ್ಕಿಯಾದರು.
ಶೌಚಾಲಯದ ಒಳಗೆ ಹಾವು ಅಡಗಿದ ಬಗ್ಗೆ ಮನೆಯವರು ಪ್ರಶಾಂತ ಹುಲೇಕಲ್ ಅವರಿಗೆ ಮಾಹಿತಿ ನೀಡಿದರು. ಅವರು ಸ್ನೇಕ್ ಸ್ಟಾರ್ ಅವರನ್ನು ಕಳುಹಿಸಿದ್ದು, ಅವರು ಉಪಾಯವಾಗಿ ಆ ಹಾವನ್ನು ಚೀಲಕ್ಕೆ ತುಂಬಿದರು. ನಂತರ ಉರಗವನ್ನು ಕಾಡಿಗೆ ಬಿಡಲಾಯಿತು.




