ಹೊನ್ನಾವರ: ಗದ್ದೆಯಲ್ಲಿ ಕೆಲಸ ಮಾಡುತಿದ್ದ ಹಿಟಾಚಿ ಮಾನವನಿಗೆ ಪಡೆದ ಪರಿಣಾಮ ಚಂದ್ರ ಮರಾಠಿ ಎಂಬಾತರು ಅಂಗವಿಕಲರಾಗಿದ್ದಾರೆ.
ಹೊನ್ನಾವರದ ಆಡುಕುಳ ಯತ್ನೊಳ್ಳಿ ಬಳಿಯ ಜಡ್ಡಿ ಶ್ರೀಕಾಂತ ನಾಯ್ಕರ ಗದ್ದೆಯಲ್ಲಿ ಹಿಟಾಚಿ ಕೆಲಸ ನಡೆಯುತ್ತಿತ್ತು. ಹಿಟಾಚಿ ಆಪರೇಟರ್ ಶಂಬು ಗೌಡ ಅಲ್ಲಿ ಮಣ್ಣು ಬಗೆಯುವ ಕೆಲಸ ಮಾಡುತ್ತಿದ್ದರು. ಡಿ 3ರಂದು ಶಂಬು ಗೌಡ ಕೆಲಸದ ಅವಧಿಯಲ್ಲಿ ಚಂದ್ರ ಮರಾಠಿ ಅವರಿಗೆ ಹಿಟಾಚಿ ತಾಗಿಸಿದರು.
ಪರಿಣಾಮ ಚಂದ್ರ ಮರಾಠಿ ಅವರ ಬಲಭಾಗದ ಕೈ’ಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ. ತೋರು ಬೆರಳು ತುಂಡಾಗಿದೆ. ಚಂದ್ರ ಮರಾಠಿ ಅವರು ಅಂಗವಿಕಲರಾಗಿದ್ದು, ಅವರನ್ನು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಹಿಟಾಚಿ ಆಪರೇಟರ್ ನಿರ್ಲಕ್ಷ್ಯದಿಂದ ಈ ಅವಘಡ ನಡೆದ ಬಗ್ಗೆ ವೇಣು ಮರಾಠಿ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ.




