ಅಂಕೋಲಾ: ಬ್ಯಾಂಕ್ ಕೆಲಸಕ್ಕೆ ಬಂದಿದ್ದ ದಯಾನಂದ ನಾಯಕ (40) ಅವರಿಗೆ ಬೈಕಿಗೆ ಇನ್ನೊಂದು ಬೈಕ್ ಗುದ್ದಿ ಪರಾರಿಯಾಗಿದೆ. ರಸ್ತೆ ನಡುವೆ ಬಿದ್ದು ಹೊರಳಾಡುತ್ತಿದ್ದ ದಯಾನಂದ ನಾಯಕ ಅವರನ್ನು ಹುಲಿ ದೇವರವಾಡದ ವಿಷ್ಣು ನಾಯ್ಕ ತಮ್ಮ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗುರುವಾರ ಆಂದ್ಲೆಯ ದಯಾನಂದ ನಾಯಕ ಸಹಕಾರಿ ಬ್ಯಾಂಕ್ ವ್ಯವಹಾರಕ್ಕಾಗಿ ಮನೆಯಿಂದ ಹೊರಟಿದ್ದರು. ಕಾರವಾರ-ಅಂಕೋಲಾ ರಸ್ತೆಯಲ್ಲಿ ಅವರ ಬೈಕಿಗೆ ಇನ್ನೊಂದು ಬೈಕ್ ಗುದ್ದಿದೆ. ಪರಿಣಾಮ ದಯಾನಂದ ನಾಯಕ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ದಯಾನಂದ ನಾಯಕ ಅವರು ರಸ್ತೆ ಮೇಲೆ ಬಿದ್ದಿರುವುದನ್ನು ನೋಡಿದ ಜನ ಆಂಬುಲೆನ್ಸಿಗೆ ಫೋನು ಮಾಡಿದರು. ಆದರೆ, ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬರಲಿಲ್ಲ.
ಆಗ ಹುಲಿ ದೇವರವಾಡದ ವಿಷ್ಣು ನಾಯ್ಕ ತಮ್ಮ ರಿಕ್ಷಾದಲ್ಲಿ ಗಾಯಾಳುವನ್ನು ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರು. ಜನ ಸೇರುವುದನ್ನು ನೋಡಿದ ಡಿಕ್ಕಿ ಹೊಡೆದ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಆತನ ಹುಡುಕಾಟ ಮುಂದುವರೆದಿದೆ.




