ಹಳಿಯಾಳ: ಕಬ್ಬು ತುಂಬಿಕೊoಡು ಹೊರಟಿದ್ದ ಟಾಕ್ಟರ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಬೈಕಿನಲ್ಲಿ ಹಿಂದೆ ಕೂತಿದ್ದ ಸಹ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಒಂದು ಟಾಕ್ಟರಿಗೆ ಎರಡು ಟ್ರಾಲಿ ಜೋಡಿಸಿಕೊಂಡು ಹೊರಟಿದ್ದ ವಾಹನ ಯಲ್ಲಾಪುರ ರಸ್ತೆಯ ಗರಡೊಳ್ಳಿ ಕ್ರಾಸಿನ ಬಳಿ ಅಪಘಾತವಾಗಿದೆ. ಇದರಿಂದ ಬೈಕು ಓಡಿಸಿಕೊಂಡು ಹೊರಟಿದ್ದ ಹುಬ್ಬಳ್ಳಿಯ ರಜತಸಿಂಗ್ ಪುರೋಹಿತ ಸಾವನಪ್ಪಿದ್ದಾನೆ.
ಬೈಕಿನಲ್ಲಿ ಜೊತೆಯಿದ್ದ ಹುಬ್ಬಳ್ಳಿಯ ರವೀಂದ್ರ ಪಾಟೀಲಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿ 4ರಂದು ಈ ಅಪಘಾತ ನಡೆದಿದ್ದು, ಹುಬ್ಬಳ್ಳಿಯ ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆಯಲ್ಲಿ ಗಾಯಾಳುವಿಕೆ ಚಿಕಿತ್ಸೆ ಮುಂದುವರೆದಿದೆ.




