6
  • Latest

ಬಿಜೆಪಿಯಲ್ಲಿ ಭಿನ್ನಮತ: ಒಡದ ಮನೆ ಒಂದುಗೂಡಿಸಲು ಅನಂತಕುಮಾರ ಎಂಟ್ರಿ ಸಾಧ್ಯತೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Wednesday, April 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಬಿಜೆಪಿಯಲ್ಲಿ ಭಿನ್ನಮತ: ಒಡದ ಮನೆ ಒಂದುಗೂಡಿಸಲು ಅನಂತಕುಮಾರ ಎಂಟ್ರಿ ಸಾಧ್ಯತೆ!

AchyutKumar by AchyutKumar
in ರಾಜಕೀಯ
advt advt advt
ADVERTISEMENT

ಬಿಜೆಪಿಯಲ್ಲಿನ ಭಿನ್ನಮತ, ಗುಂಪುಗಾರಿಕೆ ಹಾಗೂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಪಕ್ಷದ ವರಿಷ್ಠರ ಇರುಸು-ಮುರುಸಿಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ನಡೆದ ಕಾರ್ಯಕರ್ತರ ಚರ್ಚೆಯಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಹೆಸರು ಮುನ್ನಲೆಗೆ ಬಂದಿದ್ದು, `ಅವರಿಗೆ ಅಧಿಕಾರ ನೀಡಿದಲ್ಲಿ ಎಲ್ಲರನ್ನು ಸರಿದೂಗಿಸಿಕೊಂಡು ಹೋಗಲಿದ್ದಾರೆ’ ಎಂಬ ಮಾತಿಗೆ ಎಲ್ಲರೂ ತಲೆಯಾಡಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಪದೇ ಪದೇ ಮಾತನಾಡುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಹಾಗೂ ಯಡಿಯೂರಪ್ಪ ಬಣ ಬಡಿದಾಟ ಹಾದಿ-ಬೀದಿರಂಪವಾದ ಬೆನ್ನಲ್ಲೇ ರಾಜಕೀಯ ಪಡಸಾಲೆಯಲ್ಲಿ ಅನಂತಕುಮಾರ್ ಹೆಗಡೆ ಹೆಸರು ಕೇಳಿಬರುತ್ತಿದೆ. ರಾಜ್ಯ ಬಿಜೆಪಿಯ ಒಳಜಗಳ ಶಮನಕ್ಕೆ ಹೈಕಮಾಂಡ್ ಮದ್ದರಿಯಲು ಮುಂದಾಗಿದೆ. ಆದರೆ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆಯಲ್ಲಿ ಅನಂತಕುಮಾರ ಹೆಸರು ಸದ್ದು ಮಾಡುತ್ತಿದೆ. `ಅವ್ರ್ ಬಿಟ್.. ಇವ್ರ್ ಬಿಟ್.. ಇನ್ನೊಬ್ಬರಿಗೆ ಮಣೆ ಹಾಕಿದರೆ ಈ ಬಣ ಕಚ್ಚಾಟಕ್ಕೆ ಇತೀಶ್ರಿ ಹಾಡಲು ಸಾಧ್ಯ’ ಎಂಬುದು ಮೂಲ ಬಿಜೆಪಿಗರ ಅಭಿಪ್ರಾಯ. ಅವರೆಲ್ಲರೂ ಆಶಯವೂ ಅದೇ ಆಗಿದೆ. ಅನಂತಕುಮಾರ ಹೆಗಡೆ ಅವರಿಗೆ ಜವಾಬ್ದರಿವಹಿಸಿದಲ್ಲಿ ಪ್ರಭಲ ಹಿಂದುತ್ವವಾದಿ, ಸತತ ಗೆಲವು ಕಂಡ ನಾಯಕನ್ನು ನಿರ್ಲಕ್ಷಿಸಿದ ಆರೋಪದಿಂದಲೂ ಬಿಜೆಪಿ ಮುಕ್ತವಾಗಲಿದೆ.

ADVERTISEMENT
ADVERTISEMENT

ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿ ಯಡಿಯೂರಪ್ಪ ಅವರು ಹಿಡಿತ ಸಾಧಿಸಿದ ನಂತರ ಬೆದರಿದ್ದ ಕೇಂದ್ರ ಬಿಜೆಪಿ, ಯಡ್ಡಿಯೂರಪ್ಪ ನಿಯಂತ್ರಣಕ್ಕೆ ಗಟ್ಟಿಯಾಗಿ ಮಾತನಾಡುವ ಕೆಲ ನಾಯಕರನ್ನು ಮುನ್ನೆಲೆಗೆ ತಂದಿತ್ತು. ಆ ಪಟ್ಟಿಯಲ್ಲಿ ಬಸವನಗೌಡ ಯತ್ನಾಳ್ ಸಹ ಇದ್ದರು. ಹೀಗಾಗಿ ವಿಜಯೇಂದ್ರ ತಂಡದವರ ವಿರುದ್ಧ ಯತ್ನಾಳ್ ಬಹಿರಂಗವಾಗಿ ಬುಸುಗುಟ್ಟಿದರೂ ಅಷ್ಟಾಗಿ ಹೈಕಮಾಂಡ್ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಬಿಜೆಪಿಗೆ ಇದೀಗ ಯತ್ನಾಳ್ ಹಾಗೂ ಯಡಿಯೂರಪ್ಪ ವಿಷಯದಲ್ಲಿ ತಾವೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತಿರುವುದು ದೊಡ್ಡ ತಲೆನೋವಾಗಿದೆ. `ಒಂದೆಡೆ ಯತ್ನಾಳ್ ಬಾಯಿಯೂ ಮುಚ್ಚಿಸಬೇಕು. ಇನ್ನೊಂದೆಡೆ ಯಡಿಯೂರಪ್ಪ ಬಣದವರು ಜೋರಾಗದಂತೆ ನೋಡಿಕೊಳ್ಳಬೇಕು’ ಎಂಬುದು ಬಿಜೆಪಿ ಹೈ ಕಮಾಂಡ್ ಮುಂದಿರುವ ಸವಾಲು. ಈ ಸವಾಲನ್ನು ಸರಿದೂಗಿಸಿಕೊಂಡು ಹೋಗುವ ನಾಯಕ ಅಂದರೆ ಅನಂತಕುಮಾರ ಹೆಗಡೆ!

Advertisement. Scroll to continue reading.
Advertisement. Scroll to continue reading.

ಲೋಕಸಭಾ ಚುನಾವಣಾ ಆಕಾಂಕ್ಷಿಯಾಗಿದ್ದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೊಡದೇ ಅನ್ಯಾಯ ಮಾಡಿದ ಎಂಬ ಆರೋಪವಿದ್ದು, ಅದನ್ನು ಹೋಗಲಾಡಿಸಲು ಸಹ ಇದು ಸಕಾಲ. ಅನಂತಕುಮಾರ ಹೆಗಡೆ ರಾಜ್ಯ ಚುಕ್ಕಾಣಿ ಹಿಡಿದರೆ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡದು ಸಾಧಿಸಿದ ಹಿರಿಮೆ ಬಿಜೆಪಿಗೆ. ಕಾಂಗ್ರೆಸ್ಸಿಗೆ ಸಮರ್ಥವಾಗಿ ಠಕ್ಕರ್ ಕೊಡುವ ಎದೆಗಾರಿಕೆ ತೋರಿಸುವ ಶಕ್ತಿ ಅನಂತಕುಮಾರ ಹೆಗಡೆ ಅವರಿಗಿದ್ದು, ರಾಜ್ಯ ಬಿಜೆಪಿಗೆ ಅವರ ಅಗತ್ಯ ಹೆಚ್ಚಿದೆ ಎಂಬುದು ಅನೇಕ ಬಿಜೆಪಿಗರ ಮನದಾಳ. ಅನಂತಕುಮಾರ ಹೆಗಡೆ ಅವರಿಗಿರುವ ವರ್ಚಸ್ಸು ರಾಜ್ಯ ಬಿಜೆಪಿಗೆ ಶಕ್ತಿ ಕೊಡಲಿದೆ. ಹಿಂದೂ ಕಾರ್ಯಕರ್ತರ ದೊಡ್ಡ ಪಡೆ ಅನಂತಕುಮಾರ ಹೆಗಡೆ ಅವರ ಜೊತೆ ಬಿಜೆಪಿಗೆ ಬೆನ್ನಿಗೆ ನಿಲ್ಲುವ ಸಾಧ್ಯತೆಗಳಿದೆ. ಹೀಗಾಗಿ `ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಇರುವ ಮಾರ್ಗ ಇದೊಂದೆ’ ಎನ್ನುವುದು ಬಿಜೆಪಿ ಕಾರ್ಯಕರ್ತರ ಇಂಗಿತ.

ಇಷ್ಟೊAದು ಚರ್ಚೆ ನಡೆಯುತ್ತಿದ್ದರೂ ಅನಂತಕುಮಾರ ಹೆಗಡೆಯವರಿಗೆ `ರಾಜ್ಯ ರಾಜಕಾರಣಕ್ಕೆ ಬನ್ನಿ’ ಎಂದು ಅಧಿಕೃತ ಆಹ್ವಾನ ಬಂದ ಹಾಗಿಲ್ಲ. ಆಗ, `ನೀವೇ ಲೋಕಸಭೆಗೆ ನಿಲ್ಲಬೇಕು’ ಎಂದು ಗುಂಪು ಗುಂಪಾಗಿ ಅವರ ಮನೆಗೆ ಹೋಗಿ ಒತ್ತಾಯ ಮಾಡಿದ್ದ ಕಾರ್ಯಕರ್ತರು ಸಹ ಇದೀಗ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ನೇರವಾಗಿ ಹೇಳಿಕೊಳ್ಳುವ ಧೈರ್ಯ ಮಾಡಿಲ್ಲ.

ShareSendTweetShare
ADVERTISEMENT
Previous Post

ಸರ್ಕಾರಿ ಹರಾಜು | ಪೊಲೀಸ್ ಬೊಕ್ಕಸ ತುಂಬಿಸಿದ ಗುಜುರಿ ವಾಹನ!

Next Post

ಅಪಾರ್ಟಮೆಂಟಿನಿoದ ಬಿದ್ದ ವ್ಯಕ್ತಿ ಸಾವು

Next Post

ಅಪಾರ್ಟಮೆಂಟಿನಿoದ ಬಿದ್ದ ವ್ಯಕ್ತಿ ಸಾವು

ಗ್ರಾ ಪಂ ಸಿಬ್ಬಂದಿಗೆ ಗುದ್ದಿದ ಅರಣ್ಯ ಗಸ್ತು ಜೀಪು

ಮಾವನ ಮನೆಗೆ ಬಂದವನ ಬೈಕ್ ಕಳ್ಳತನ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.