ಮುಂಡಗೋಡ: ಕೆಲಸ ಹುಡುಕಿ ಹುಬ್ಬಳ್ಳಿಗೆ ಹೋದ ಹುಲಿಯಪ್ಪ ಪೂಜಾರ್ ಕಾಣೆಯಾಗಿದ್ದಾರೆ.
ಮುಂಡಗೋಡು ನೆಹರು ನಗರದ ಹುಲಿಯಪ್ಪ ಸಿದ್ರರಾಮಪ್ಪ ಪೂಜಾರ್ (53) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಡಿಸೆಂಬರ್ 4ರಂದು ಬೆಳಗ್ಗೆ 11.30ರ ವೇಳೆಗೆ ಅವರು ಹುಬ್ಬಳ್ಳಿಗೆ ಹೊರಟಿದ್ದರು. `ಕೆಲಸ ಹುಡುಕಿ ಬರುವೆ’ ಎಂದು ಮನೆಯಲ್ಲಿ ಹೇಳಿ ಅವರು ಹೋಗಿದ್ದರು.
ಆದರೆ, ಈವರೆಗೂ ಅವರು ಮನೆಗೆ ಮರಳಿಲ್ಲ. ಹುಬ್ಬಳ್ಳಿಯಲ್ಲಿ ಸಹ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ `ಕಾಣೆಯಾದ ತಂದೆಯನ್ನು ಹುಡುಕಿಕೊಡಿ’ ಎಂದು ಅವರ ಮಗ ಮಹೇಶ ಪೂಜಾರ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಸಹ ಹುಲಿಯಪ್ಪ ಅವರ ಹುಡುಕಾಟ ನಡೆಸಿದ್ದಾರೆ.




