6
  • Latest
Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!

ದಿವ್ಯ ದೇಗುಲ | ದತ್ತ ಮಂದಿರಕ್ಕೆ ಶಿವಾನಂದ ಶ್ರೀಗಳ ಕೊಡುಗೆ ಅಪಾರ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ದಿವ್ಯ ದೇಗುಲ | ದತ್ತ ಮಂದಿರಕ್ಕೆ ಶಿವಾನಂದ ಶ್ರೀಗಳ ಕೊಡುಗೆ ಅಪಾರ!

AchyutKumar by AchyutKumar
December 11, 2024
in ಲೇಖನ
ದತ್ತ ಮಂದಿರ

ದತ್ತ ಮಂದಿರ

advt advt advt
ADVERTISEMENT

ಶಿರಸಿ ಬಪ್ಪನಕೊಡ್ಲುವಿನ ಕುಂಬರಿಗುಡ್ಡೆಯ ಕಲ್ಲಿನ ಗುಹೆಯಲ್ಲಿ ತಪಸ್ಸು ನಡೆಸಿ ಆಧ್ಯಾತ್ಮ ಶಕ್ತಿ ಪಡೆದವರು ಶಿವಾನಂದ ಸ್ವಾಮೀಜಿ. ಕೊಳಗಿಬೀಸಿನ ಅವದೂತ ಸ್ವಾಮೀಜಿ, ಶ್ರೀಧರ ಸ್ವಾಮೀಜಿ ಅವರನ್ನು ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದ ಶಿವಾನಂದ ಸ್ವಾಮೀಜಿ ಯಲ್ಲಾಪುರದ ನಾಯ್ಕನಕೆರೆಯಲ್ಲಿ ನೆಲೆ ನಿಂತರು. ಪ್ರಸ್ತುತ ನಾಯ್ಕನಕೆರೆಯ ಭವ್ಯ ಪರಿಸರದಲ್ಲಿ ದಿವ್ಯ ದತ್ತ ಮಂದಿರ ನಿರ್ಮಾಣವಾಗುತ್ತಿದ್ದು, ಈ ಹಿಂದೆ ಇದ್ದ ದೇಗುಲ ಜೀರ್ಣೋದ್ಧಾರಕ್ಕೆ ಸ್ವಾಮೀಜಿಯವರ ಕೊಡುಗೆ ಅಪಾರ.

ಶಿವಾನಂದ ಸ್ವಾಮೀಜಿ

ಕೊಳಗಿಬೀಸಿನ ಬಳಿ ಆರು ವರ್ಷಗಳ ವನಪ್ರಸ್ತಾಶ್ರಮ ನಡೆಸಿದ್ದ ಶಿವಾನಂದ ಸ್ವಾಮೀಜಿಯವರು ಅಲ್ಲಿನ ಗುಡ್ಡಗಾಡುಗಳಲ್ಲಿ ಬೆಳೆದ ಗಡ್ಡೆ-ಗೆಣಸು ಹಾಗೂ ಎಲೆಗಳನ್ನು ಸೇವಿಸಿ ಧ್ಯಾನ ಮಾಡುತ್ತಿದ್ದರು. 1963ರ ಅವಧಿಯಲ್ಲಿ ದತ್ತ ಮಂದಿರದ ಪೂಜಾ ಕಾರ್ಯಕ್ಕಾಗಿ ಸ್ಥಳೀಯರು ಯೋಗ್ಯರನ್ನು ಹುಡುಕಾಡುತ್ತಿರುವಾಗ ಅವಧೂತರ ಆದೇಶದ ಪ್ರಕಾರ ನಾಯ್ಕನಕೆರೆಗೆ ಬಂದ ಶಿವಾನಂದ ಸ್ವಾಮೀಜಿ ದತ್ತ ಮಂದಿರದ ಉಸ್ತುವಾರಿವಹಿಸಿಕೊಂಡರು.

ADVERTISEMENT
ADVERTISEMENT

ಇದನ್ನೂ ಓದಿ: ಮೂರೇ ತಿಂಗಳಿನಲ್ಲಿ ನಿರ್ಮಾಣವಾದ ಕೋಟಿ ರೂ ವೆಚ್ಚದ ಮಂದಿರ!

ಆ ಅವಧಿಯಲ್ಲಿ ದತ್ತ ಮಂದಿರ ಗರ್ಭಗುಡಿಯನ್ನು ಮಾತ್ರ ಹೊಂದಿತ್ತು. ಶಿವಾನಂದ ಸ್ವಾಮೀಜಿಯವರು ಇಲ್ಲಿ ಗಂಟೆ ಮಂಟಪ, ಚಂದ್ರಶಾಲೆ, ಗೋಶಾಲೆಗಳನ್ನು ಮಾಡಿದರು. ಅಪಾರ ದಾನಿಗಳು ಈ ಕಾರ್ಯಗಳಿಗೆ ಆರ್ಥಿಕ ನೆರವು ನೀಡಿದರು. ಆ ಕಾಲದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು. ಸರಿಸುಮಾರು ಎರಡು ದಶಕಗಳ ಕಾಲ ಶಿವಾನಂದ ಸ್ವಾಮೀಜಿಯವರು ನಾಯ್ಕನಕೆರೆಯಲ್ಲಿ ನೆಲೆನಿಂತರು.

ಶಿವಾನ0ದ ಸ್ವಾಮೀಜಿಯವರಿಗೆ ವಯಸ್ಸಾದಾಗ ಅವರ ಪೂರ್ವಾಶ್ರಮದ ಮಕ್ಕಳ ಪೈಕಿ ಒಬ್ಬರಾದ ಸೀತಾರಾಮ ಹೆಗಡೆ ಅವರು ದತ್ತ ಮಂದಿರ ಪ್ರವೇಶ ಮಾಡಿದರು. ಸ್ವಾಮೀಜಿ ಸೇವೆ ಜೊತೆ ದೇವರ ಪೂಜೆಯ ಹೊಣೆಯನ್ನು ಸೀತಾರಾಮ ಹೆಗಡೆ ಅವರುವಹಿಸಿಕೊಂಡರು. 1984ರಲ್ಲಿ ಶಿವಾನಂದ ಸ್ವಾಮೀಜಿ ಮುಕ್ತಿ ಪಡೆದಿದ್ದು, ಅವರ ಇಚ್ಚೆಗನುಸಾರವಾಗಿ ಇದೇ ಕ್ಷೇತ್ರದಲ್ಲಿ ಅವರ ಸಮಾಧಿ ನಡೆಯಿತು.

ಇದನ್ನು ಓದಿ: ದತ್ತ ಮಂದಿರದ ವಿಶೇಷತೆಗಳೇನು?

ಶಿವಾನಂದ ಸ್ವಾಮೀಜಿ ಅವರು ತಪಸ್ಸು ಮಾಡಿದ ಗುಹೆ

ಶಿವಾನಂದ ಸ್ವಾಮೀಜಿಯವರ ಪೂರ್ವಾಶ್ರಮದ ಕುಟುಂಬದವರಾದ ಅಶೋಕ ಹೆಗಡೆ ಅವರು ಪ್ರಸ್ತುತ ಈ ದೇವಾಲಯದ ಅರ್ಚಕರಾಗಿದ್ದಾರೆ. ಅಶೋಕ ಹೆಗಡೆ ಅವರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಹೊಸನಗರಲ್ಲಿ ಭೇಟಿ ಮಾಡಿ ದತ್ತ ಮಂದಿರದ ಜೀರ್ಣೋದ್ಧಾರದ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಮುಂದುವರೆದ ಭಾಗವಾಗಿ 2008ರಲ್ಲಿ ರಾಮಚಂದ್ರಾಪುರ ಮಠದವರು ದತ್ತ ಮಂದಿರದ ಉಸ್ತುವಾರಿಯನ್ನು ಮಠದ ಪ್ರತಿನಿಧಿ ಎಸ್ ವಿ ಯಾಜಿ ಅವರಿಗೆವಹಿಸಿದರು.

Advertisement. Scroll to continue reading.

ಇದನ್ನು ಓದಿ: ದೇವಾನುದೇವತೆಗಳು ಪುಣ್ಯಭೂಮಿ ಈ ದೇಗುಲ!

Advertisement. Scroll to continue reading.

ಅದರ ಪ್ರಕಾರ 2023ರ ದತ್ತ ಜಯಂತಿ ದಿನ ರಾಘವೇಶ್ವರ ಭಾರತೀ ಶ್ರೀಗಳು ಮುಂದಿನ ದತ್ತ ಜಯಂತಿಯ ಒಳಗೆ ದೇವಾಲಯದ ಜೀರ್ಣೋದ್ಧಾರ ನಡೆಸಲು ಸಂಕಲ್ಪಿಸಿದರು. ಏಳು ದಶಕಗಳಿಂದಲೂ ದೇಗುಲದ ಪೂಜಾ ಕಾರ್ಯವನ್ನು ಹೆಗಡೆ ಕುಟುಂಬದವರು ನಡೆಸುತ್ತಿದ್ದಾರೆ. ಪ್ರಸ್ತುತ ಅದೇ ಕುಟುಂಬದ ಈಗಿನ ಅರ್ಚಕ ಅಶೋಕ ಹೆಗಡೆ ಅವರು ನೂತನ ದೇವಾಲಯಕ್ಕೆ 1.96 ಲಕ್ಷ ರೂ ವೆಚ್ಚದ ದತ್ತ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಇದನ್ನು ಓದಿ: ದತ್ತ ಮಂದಿರದಲ್ಲಿ ತ್ರಿಮೂರ್ತಿ ದರ್ಶನ!

ಅನಾಧಿಕಾಲದಿಂದಲೂ ಶಿವಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಕುಟುಂಬದವರು ದತ್ತ ಮಂದಿರದ ಸೇವೆಯಲ್ಲಿರುವುದನ್ನು ತಿಳಿದು ಅದೇ ಮನೆತನದ ವನಜಾಕ್ಷಿ ಹೆಬ್ಬಾರ್ ಸಂತಸ ವ್ಯಕ್ತಪಡಿಸಿದರು.

ShareSendTweetShare
ADVERTISEMENT
Previous Post

ಸ್ವಚ್ಛತೆಯ ಮಂತ್ರ | ಪೌರ ಕಾರ್ಮಿಕರ ಜೊತೆ ಬೀದಿ ಗುಡಿಸಿದ ವಿದೇಶಿಗರು!

Next Post

ಆಯುಷ್ ವೈದ್ಯರಿಗೆ ಕಪಾಳ ಮೋಕ್ಷ: ಜ್ವರದಿಂದ ನಡುಗಿ ಆಸ್ಪತ್ರೆ ಸೇರಿದ ಸರ್ಕಾರಿ ವೈದ್ಯ!

Next Post

ಆಯುಷ್ ವೈದ್ಯರಿಗೆ ಕಪಾಳ ಮೋಕ್ಷ: ಜ್ವರದಿಂದ ನಡುಗಿ ಆಸ್ಪತ್ರೆ ಸೇರಿದ ಸರ್ಕಾರಿ ವೈದ್ಯ!

ಬಿಪಿ-ಶುಗರು | ಕೈಗಾ ಅಣು ಉದ್ಯೋಗಿ ಸಾವಿನಲ್ಲಿ ಅನುಮಾನವೇ ಇಲ್ಲ!

Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!

ಲೋಕಾರ್ಪಣೆಗೆ ಸಜ್ಜುಗೊಂಡ ನಾಯ್ಕನಕೆರೆ ದತ್ತ ಮಂದಿರ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.