ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ಅಳವಡಿಸಿದ ಹಂಪ್ ಬೈಕ್ ಸವಾರನ ಜೀವ ತೆಗೆದಿದೆ. ನೂತನವಾಗಿ ಹಂಪ್ ಅಳವಡಿಸಿದ ನಂತರ ಅಧಿಕಾರಿಗಳು ಅಲ್ಲಿ ಸೂಚನಾ ಫಲಕವನ್ನು ಅಳವಡಿಸದ ಕಾರಣ ಜೋಗಿಮನೆ ಮುಂಡಳ್ಳಿಯ ರೂಪೇಶ ದೇವಾಡಿಗ (30) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಶನಿವಾರ ರೂಪೇಶ ದೇವಾಡಿಗ ಹಾಗೂ ಸುಬ್ರಾಯ ದೇವಾಡಿಗ ಬೈಕಿನಲ್ಲಿ ಚಲಿಸುತ್ತಿದ್ದರು. ಮುರುಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅವರು ಸಂಚರಿಸುತ್ತಿದ್ದಾಗ ಶಿರಾಲಿ ಚೆಕ್ಪೋಸ್ಟ್ ಹತ್ತಿರ ಬೈಕಿನಿಂದ ಬಿದ್ದರು.
ಪರಿಣಾಮ ಇಬ್ಬರೂ ಗಾಯಗೊಂಡಿದ್ದು, ರೂಪೇಶ ದೇವಾಡಿಗ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಪ್ರಯೋಜನಕ್ಕೆ ಬರಲಿಲ್ಲ.




