ಕಾರವಾರ: ಕಿನ್ನರ ಆಚಾರಿವಾಡದ ಕಿರಣ ಆಚಾರಿ (29) ಬೈಕಿನಿಂದ ಬಿದ್ದು ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದಾರೆ.
ಈಚೆಗೆ ಕಾರವಾರದಿಂದ ಕಿನ್ನರ ಕಡೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಶಿರವಾಡದ ನ್ಯಾಯಬೆಲೆ ಅಂಗಡಿ ಬಳಿ ಅವರು ಬೈಕಿನಿಂದ ಬಿದ್ದಿದ್ದಾರೆ. ಎದುರಿನಿಂದ ಬಂದ ದನಕ್ಕೆ ಬೈಕು ಗುದ್ದುವುದನ್ನು ತಪ್ಪಿಸುವ ಬರದಲ್ಲಿ ಅವರು ರಸ್ತೆ ಮೇಲೆ ಬಿದ್ದು ಪೆಟ್ಟು ಮಾಡಿಕೊಂಡರು.
ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಅವರನ್ನು ಗಣೇಶ ಗುನಗಿ ಆರೈಕೆ ಮಾಡಿದರು. ನಂತರ 108ಗೆ ಫೋನ್ ಮಾಡಿ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಹೆಚ್ಚಿನಿ ಚಿಕಿತ್ಸೆ ಅಗತ್ಯ ಎಂದ ಕಾರಣ ಕಿರಣ ಆಚಾರಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.




