6
  • Latest

ಬಾಗಿಲು ತೆರೆಯದ ಸಾಹಿತ್ಯ ಭವನ: ಕಾರ್ ಶೆಡ್ಡಿನಲ್ಲಿ ಬಿಡುಗಡೆಯಾದ ಸಮ್ಮೇಳನದ ಆಮಂತ್ರಣ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಬಾಗಿಲು ತೆರೆಯದ ಸಾಹಿತ್ಯ ಭವನ: ಕಾರ್ ಶೆಡ್ಡಿನಲ್ಲಿ ಬಿಡುಗಡೆಯಾದ ಸಮ್ಮೇಳನದ ಆಮಂತ್ರಣ!

AchyutKumar by AchyutKumar
December 16, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ವರ್ಷವಿಡೀ ಬಾಗಿಲು ಹಾಕಿಕೊಂಡಿರುವ ಸಾಹಿತ್ಯ ಭವನವೂ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಹ ಬಾಗಿಲು ತೆರೆಯಲಿಲ್ಲ. ಹೀಗಾಗಿ ಭಾನುವಾರ ಸಂಜೆ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಕಾರ್ ಶೆಡ್ಡಿನಲ್ಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು!

ADVERTISEMENT

ಆಮಂತ್ರಣ ಪತ್ರಿಕೆ ಬಿಡುಗಡೆಗೆ ಶಾಸಕರ ಬಳಿ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅವರು ಸಮಯ ಪಡೆದಿರಲಿಲ್ಲ. `ಆಮಂತ್ರಣ ಪತ್ರಿಕೆ ತೋರಿಸಿಕೊಂಡು ಹೋಗುವೆ’ ಎಂದು ಸಮಯ ಪಡೆದಿದ್ದ ಅವರು ಕೊನೆಗೆ ಕಾರ್ ಶೆಡ್ಡಿನಲ್ಲಿಯೇ ಅದನ್ನು ಬಿಡುಗಡೆ ಮಾಡಿಸಿದರು. `ಇಲ್ಲಿ ಬೇಡ. ಸಾಹಿತ್ಯ ಭವನ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಗೌರವಯುತವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ’ ಎಂದು ಶಾಸಕರ ಕಚೇರಿಯವರು ಸೂಚಿಸಿದರೂ ಅದನ್ನು ಒಪ್ಪಲಿಲ್ಲ. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಸಾಪ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರರು ಹಾಜರಿರಲಿಲ್ಲ. ಗಡಿಬಿಡಿಯಲ್ಲಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಮಿಷದೊಳಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡರು!

Advertisement. Scroll to continue reading.
ADVERTISEMENT
ADVERTISEMENT

ಮಂಚಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೆ, ಇದಕ್ಕೆ ಬಹುತೇಕ ಕಸಾಪ ಸದಸ್ಯರಿಗೆ ಆಮಂತ್ರಣವಿಲ್ಲ. ವಾಟ್ಸಪ್ ಮೂಲಕ ಆಯ್ದ ವ್ಯಕ್ತಿಗಳಿಗೆ ಮಾತ್ರ ಕರೆಯೋಲೆ ನೀಡಲಾಗಿದ್ದು, ಮುಖತ: ಭೇಟಿ ಆದವರಿಗೂ ಕಾರ್ಯಕ್ರಮಕ್ಕೆ ಕಸಾಪ ಪದಾಧಿಕಾರಿಗಳು ಆಮಂತ್ರಿಸುತ್ತಿಲ್ಲ ಎಂಬ ಆರೋಪವಿದೆ. `ಕಾಸು ಕೊಡುವವರಿಗೆ ಹಾಗೂ ಕಾಸು ಮಾಡಿಕೊಳ್ಳುವವರಿಗೆ ಮಾತ್ರ ತಾಲೂಕು ಕಸಾಪದಲ್ಲಿ ವಿಶೇಷ ಮನ್ನಣೆ’ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.

Advertisement. Scroll to continue reading.
Advertisement. Scroll to continue reading.

ಇನ್ನೂ ಈ ಬಾರಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಕೃಷ್ಣ ಭಟ್ಟ ದುಂಡಿ ಅವರು ರಂಗಭೂಮಿ ಕ್ಷೇತ್ರದಲ್ಲಿ ಸಾಧಕರು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರಲ್ಲ. ಯಲ್ಲಾಪುರದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಇನ್ನೊಂದು ಆಕ್ಷೇಪಕ್ಕೆ ಕಾರಣ.

ಶಿವರಾಮ ಹೆಬ್ಬಾರ್ ಅವರು ತಮ್ಮ ಕಾರು ಶೆಡ್ಡಿನಲ್ಲಿ ಕಸಾಪ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವಾಗ ಕ.ಸಾ.ಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಗೌರವ ಕಾರ್ಯದರ್ಶಿ ಜಿ ಎನ್ ಭಟ್ಟ ತಟ್ಟಿಗದ್ದೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು.

ShareSendTweetShare
ADVERTISEMENT
Previous Post

ನಿವೃತ್ತ ನೌಕರನ ನಿರ್ಲಕ್ಷ್ಯಕ್ಕೆ ಯುವಕ ಬಲಿ!

Next Post

ಜಯ ಕರ್ನಾಟಕ | ವೃಕ್ಷಮಾತೆ ನಿಧನಕ್ಕೆ ಜನಪರ ವೇದಿಕೆ ಸಂತಾಪ

Next Post

ಜಯ ಕರ್ನಾಟಕ | ವೃಕ್ಷಮಾತೆ ನಿಧನಕ್ಕೆ ಜನಪರ ವೇದಿಕೆ ಸಂತಾಪ

ತುಳಸಿ ನಿಧನಕ್ಕೆ ಜನ ಸಾಮಾನ್ಯರ ಸಂತಾಪ

ತುಳಸಿ ಸೇವೆ ಸ್ಮರಿಸಿದ ಸಾಲುಮರದ ತಿಮ್ಮಕ್ಕ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.