6
  • Latest

ಅವರು ಸರ್ಕಾರಿ ಸೇವೆಯ ವಾಮನಮೂರ್ತಿ: ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅವರು ಸರ್ಕಾರಿ ಸೇವೆಯ ವಾಮನಮೂರ್ತಿ: ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ!

AchyutKumar by AchyutKumar
December 25, 2024
in ರಾಜ್ಯ, ಲೇಖನ
advt advt advt
ADVERTISEMENT

ಕಾರವಾರ: ಸರ್ಕಾರಿ ಸೇವೆ ಸೇರಬೇಕು ಎಂಬುದು ಎಲ್ಲರ ಕನಸು. ಸರ್ಕಾರಿ ಸೇವೆ ಸೇರಿದ ನಂತರ ಹೇಗಿರಬೇಕು? ಎನ್ನುವುದಕ್ಕೆ ವಿನೋದ ಅಣ್ವೇಕರ್ ಅವರು ಮಾದರಿ. 1989ರಲ್ಲಿ ಸಹಾಯಕ ಸಂಖ್ಯಾಧಿಕಾರಿಯಾಗಿ ಸೇವೆಗೆ ಸೇರಿದ ವಿನೋದ ಅಣ್ವೇಕರ್ ಅವರು ಇದೀಗ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಯೋಜನಾಧಿಕಾರಿಯಾಗಿದ್ದಾರೆ. 35 ವರ್ಷಗಳ ಸೇವೆ ಪೂರೈಸಿ ಡಿಸೆಂಬರ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.

ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ವಿನೋದ ಅನ್ವೇಕರ್ ಅವರ ಮಾತೃ ಇಲಾಖೆ. ಅದಾಗಿಯೂ ಅವರು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ನಿಯೋಜನೆ ಆಧಾರದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಯೋಜನಾಧಿಕಾರಿಯಾಗಿದ್ದಾರೆ. ಶಿರಸಿ, ಅಂಕೋಲಾ, ಹೊನ್ನಾವರ, ಕಾರವಾರ, ಬೆಳಗಾವಿ ಸೇರಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದು, ಅವರ ಸೇವಾ ಪುಸ್ತಕದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ದಾಖಲಾಗಿಲ್ಲ. 35 ವರ್ಷದ ಸರ್ಕಾರಿ ಸೇವೆಯಲ್ಲಿ ಅವರ ವಿರುದ್ಧ ಒಂದು ಆರೋಪವೂ ಕೇಳಿ ಬಂದಿಲ್ಲ. ಸುದೀರ್ಘ ಸರ್ಕಾರಿ ಸೇವೆಯಲ್ಲಿದ್ದರೂ ಅವರಿಗೆ ಒಬ್ಬರೂ ವಿರೋಧಿಗಳಿಲ್ಲ. ಸರ್ಕಾರಿ ನೌಕರರಿಗೆ ಸಾಮಾನ್ಯವಾದ `ಕಾರಣ ಕೇಳಿ ನೋಟಿಸ್’ ಸಹ ವಿನೋದ ಅಣ್ವೇಕರ್ ಅವರ ಹೆಸರಿನಲ್ಲಿ ಜಾರಿಯಾಗಿಲ್ಲ!

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇನ್ನೂ ವಿನೋದ ಅಣ್ವೇಕರ್ ಅವರು ತಮ್ಮ ಸೇವಾ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಕೆಲಸ ಮಾಡಿದ್ದಾರೆ. ತಮ್ಮ ಅಧಿಕಾರವನ್ನು ಬಳಸಿಕೊಂಡು ಶಾಲೆಗಳಿಗೆ ನೆರವು ನೀಡಿದ್ದಾರೆ. ಅನೇಕ ವರ್ಷಗಳಿಂದ ಬಾಕಿಯಿದ್ದ ಕಡತಗಳಿಗೆ ಇತಿಶ್ರೀ ಹಾಡಿದ್ದಾರೆ. ಆವಾಸ್ ಯೋಜನೆಗಳಲ್ಲಿ ನೈಜ ಪಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಬಡವರ ಮನೆಗೆ ಸ್ವಂತ ಸಂಬಳ ಖರ್ಚು ಮಾಡಿದ್ದಾರೆ. ಜೊಯಿಡಾ ಹಾಗೂ ಮುಂಡಗೋಡು ತಾಲೂಕಿನ ಹಿಂದುಳಿದ ಪ್ರದೇಶಗಳ ಬಗ್ಗೆ ಸರ್ಕಾರದ ಗಮನಸೆಳೆಯುವಲ್ಲಿಯೂ ವಿನೋದ ಅಣ್ವೇಕರ ಅವರ ಪಾತ್ರ ಅಪಾರ.

ಶಾಲಾ-ಕಾಲೇಜುಗಳಿಗೆ ತೆರಳಿ ತೆಂಗಿನ ಗಿಡ ನೆಡುವಿಕೆ, ಹಣ್ಣು-ಹಂಪಲು ಗಿಡ ವಿತರಣೆ ಅವರ ಪ್ರಮುಖ ಹವ್ಯಾಸ. ಬಿಡುವಿದ್ದಾಗಲೆಲ್ಲ ಅವರು ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿನೋದ ಅಣ್ವೇಕರ್ ಅವರು ಈವರೆಗೂ ಪ್ರಶಸ್ತಿಗಳ ಹಿಂದೆ ಬಿದ್ದಿಲ್ಲ. ಅದಕ್ಕಾಗಿ ಪ್ರಯತ್ನವನ್ನು ನಡೆಸಿಲ್ಲ. ಅದಾಗಿಯೂ ಅವರ ಸೇವೆ ಗುರುತಿಸಿ ವೈಜ್ಞಾನಿಕ ಸಂಶೋಧನಾ ಪರಿಷತ್ತು `ಕಾಯಕ ರತ್ನ ಪ್ರಶಸ್ತಿ’ ಹಾಗೂ ಸರ್ಕಾರ `ಜಿಲ್ಲಾ ಮಟ್ಟದ ಪ್ರಶಸ್ತಿ’ ನೀಡಿ ಗೌರವಿಸಿದೆ.

ShareSendTweetShare
ADVERTISEMENT
Previous Post

ಜೈಲಿಗೆ ಹೋದರೂ ಬರಲಿಲ್ಲ ಬುದ್ದಿ! | ಜಾತ್ರೆಯಲ್ಲಿ ಜಗಳ.. ಇದೀಗ ಹೊಡೆದಾಟ.. ಕಲ್ಲು ತೂರಾಟ!

Next Post

ಕಾಪಾಡು ಜಗನ್ಮಾನತೆ | ಮಾರಿಕಾಂಬೆ ಮೂರ್ತಿಯೇ ಕಣ್ಮರೆ!

Next Post

ಕಾಪಾಡು ಜಗನ್ಮಾನತೆ | ಮಾರಿಕಾಂಬೆ ಮೂರ್ತಿಯೇ ಕಣ್ಮರೆ!

ಸಾಹಸಿ ಮಹಿಳೆಯ ಅಸಹಜ ಸಾವು: ಕೊಲೆಯ ಅನುಮಾನ!

ಕ್ಯಾಮರಾ ಮಹಾತ್ಮೆ | ಕದ್ದ ಬೈಕ್ ಮರಳಿಸಿದ ಚೋರ: ಆತ ಕಳ್ಳನಾದರೂ ಪ್ರಾಮಾಣಿಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.