ಭಟ್ಕಳ: ಪೆಟ್ರೋಲ್ ಬಂಕಿನಲ್ಲಿ ನಿಲ್ಲಿಸಿದ್ದ ಬೈಕ್ ಕದ್ದ ಕಳ್ಳನೊಬ್ಬ ಕ್ಯಾಮರಾ ಕಣ್ಣಿಗೆ ಬೆದರಿ ಮತ್ತೆ ಬೈಕ್ ತಂದು ನಿಲ್ಲಿಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂಶುದ್ಧೀನ್ ಸರ್ಕಲ್ ಬಳಿಯ ಭಾರತ್ ಪೆಟ್ರೋಲ್ ಬಂಕಿನಲ್ಲಿ ಈ ಕಳ್ಳತನ ಹಾಗೂ ಶರಣಾಗತಿ ಪ್ರಕ್ರಿಯೆ ನಡೆದಿದೆ.
ಭಟ್ಕಳದ ಬೆಳ್ನಿ ಬಳಿಯ ಮಂಜುನಾಥ ಹೆಮ್ಮಯ್ಯ ನಾಯ್ಕ ಅವರಿಗೆ ಸೇರಿದ ಬೈಕ್ ಕಳ್ಳತನವಾಗಿತ್ತು. ಮಂಗಳವಾರ ಬೆಳ್ಳಿಗ್ಗೆ 11.30ಕ್ಕೆ ಅವರು ಭಾರತ್ ಪೆಟ್ರೋಲ್ ಪಂಪಿನಲ್ಲಿ ತಮ್ಮ ಬೈಕ್ ನಿಲ್ಲಿಸಿದ್ದರು. 15 ನಿಮಿಷ ಮಾರುಕಟ್ಟೆ ಕಡೆ ತೆರಳಿದ ಅವರು ಕೆಲಸ ಮುಗಿಸಿ ಮರಳುವಷ್ಟರಲ್ಲಿ ಬೈಕ್ ಇರಲಿಲ್ಲ.
ಪೆಟ್ರೋಲ್ ಬಂಕ್ ಬಳಿ ಬೈಕಿನಲ್ಲಿ ಬಂದ ಕಳ್ಳ ತಾನು ತಂದ ಬೈಕನ್ನು ಅಲ್ಲಿ ನಿಲ್ಲಿಸಿ ಮಂಜುನಾಥ ನಾಯ್ಕ ಅವರ ಬೈಕಿನ ಬಳಿ ಸುಳಿದಾಡಿದ್ದಾನೆ. ಚಕಲಿ ಚಾವಿ ಬಳಸಿ ಅವರ ಬೈಕನ್ನು ಕದ್ದು ಪರಾರಿಯಾಗಿದ್ದಾನೆ. ಈ 11.14ರ ಅವಧಿಯಲ್ಲಿ ಅಲ್ಲಿಗೆ ಆಗಮಿಸಿದ ಮಂಜುನಾಥ ನಾಯ್ಕರು ಬೈಕ್ ಕಾಣೆಯಾದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಅಕ್ಕ-ಪಕ್ಕದವರ ಬಳಿ ವಿಚಾರಿಸಿದರೂ ಬೈಕಿನ ಬಗ್ಗೆ ಸುಳಿವು ಸಿಗಲಿಲ್ಲ.
ಪೆಟ್ರೋಲ್ ಬಂಕಿನವರಿಗೆ ಮನವಿ ಮಾಡಿ ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಕಳ್ಳನ ಕೈ ಚಳಕ ಗೊತ್ತಾಗಿದೆ. ಈ ಬಗ್ಗೆ ಅವರು ಪೊಲೀಸ್ ದೂರು ನೀಡುವ ತಯಾರಿ ನಡೆಸುವ ವೇಳೆ, ಅಂದರೆ ಸಂಜೆ ಹೊತ್ತಿಗೆ ಆ ಕಳ್ಳ ಬೈಕನ್ನು ಮರಳಿ ಅದೇ ಜಾಗದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ.
ಈ ಎಲ್ಲಾ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
#S News Digitel Advertisement: ನಿಮ್ಮ ಮನೆ-ತೋಟ-ಮಳಿಗೆ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಗುಣಮಟ್ಟದ ಕ್ಯಾಮರಾಗಳಿಗೆ ಇಲ್ಲಿ ಸಂಪರ್ಕಿಸಿ – 6362189206





