6
  • Latest

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

AchyutKumar by AchyutKumar
in ಸ್ಥಳೀಯ

ಶಿರಸಿ: ಅರಣ್ಯ ವಿದ್ಯಾಲಯ ಆವರಣದಲ್ಲಿ ನಡೆದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 78 ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಮೂವರು 5 ಸಾವಿರ ರೂ ಹಣದ ಜೊತೆ ಮೊದಲ ಬಹುಮಾನ ಗೆದ್ದರು. ಸಿಹಿ ಖಾದ್ಯ ವಿಭಾಗದಲ್ಲಿ ಯಲ್ಲಾಪುರ ದೋಣಗಾರಿನ ಪ್ರೇಮಾ ಜೋಶಿ, ಖಾರ ಖಾದ್ಯ ವಿಭಾಗದಲ್ಲಿ ಶಿರಸಿ ಕಾನಗೋಡಿನ ಜಲಜಾಕ್ಷಿ ಹೆಗಡೆ ಹಾಗೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಸಿದ್ದಾಪುರ ಗೊದ್ಲಬಳದ ಆಶಾ ಹೆಗಡೆ ಮೊದಲ ಸ್ಥಾನ ಪಡೆದರು.

ಕೃಷಿ ಇಲಾಖೆಯವರು ಈ ಸ್ಪರ್ಧೆ ಆಯೋಜಿಸಿದ್ದು, ಎರಡನೇ ಬಹುಮಾನ ಪಡೆದವರಿಗೆ 3 ಸಾವಿರ ರೂ ಹಾಗೂ 3ನೇ ಬಹುಮಾನ ಪಡೆದವರಿಗೆ 2 ಸಾವಿರ ರೂ ನೀಡಿದೆ. ಸಿಹಿ ಖಾದ್ಯಕ್ಕಾಗಿ ಪ್ರೇಮಾ ಜೋಶಿ ಅವರು ತೊಡದೇವು ಮಾಡಿ ತಂದಿದ್ದರು. ಸಿದ್ದಾಪುರ ತ್ಯಾಗಲಿಯ ರೇಖಾ ಹೆಗಡೆ ಮಾಡಿದ ಮಿಲ್ಕ್ ಶೇಖ್ ಎರಡನೇ ಬಹುಮಾನ ಪಡೆಯಿತು. ಶಿರಸಿ ದೇವತೆಮನೆಯ ಸೀತಾ ಹೆಗಡೆ ಸುಳಿಗಡಬು ಮಾಡಿ ಮೂರನೇ ಬಹುಮಾನ ಪಡೆದರು. ಖಾರ ತಿನಿಸು ವಿಭಾಗದಲ್ಲಿ ಜಲಜಾಕ್ಷಿ ಹೆಗಡೆ ಅವರು ಫಲಾವ್ ಉಣಬಡಿಸಿ 5 ಸಾವಿರ ರೂ ಗೆದ್ದರು. ಕುಸುಮಾ ಹೆಗಡೆ ಅವರು ಸಿರಿಧಾನ್ಯದ ಕರೆ ಮಾಡಿ 3 ಸಾವಿರ ರೂ ಹಾಗೂ ಜೊಯಿಡಾ ಕುಂಬಾರವಾಡದ ಇಂದಿರಾ ಕಾಮತ್ ಉದ್ದಿನ ಕಟ್ಲೆಟ್ ಮಾಡಿ 2 ಸಾವಿರ ರೂ ಜೊತೆ ಮೂರನೇ ಬಹುಮಾನ ಪಡೆದರು.

ಇನ್ನೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಆಶಾ ಹೆಗಡೆ ಅಪರೂಪದ ಜಾನ್ ಸಕ್ಕರೆ ಮಾಡಿ ತಂದಿದ್ದರು. ಯಲ್ಲಾಪುರ ಉಮ್ಮಚ್ಗಿಯ ನಯನಾ ಹೆಗಡೆ ಬೆಲ್ಲದ ಚಾಕ್ಲೆಟ್ ಸಿದ್ದಪಡಿಸಿದ್ದರು. ಬನವಾಸಿಯ ಪುಷ್ಪ ಸಣ್ಣಲಿಂಗನವರ್ ಕುಂಬಳಕಾಯಿ ಖಾದ್ಯ ತಯಾರಿಸಿದ್ದರು. ಆಶಾ ಅವರು ಪ್ರಥಮ, ನಯನಾ ಅವರು ದ್ವಿತೀಯ, ಪುಷ್ಪ ಅವರು ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಶಾಸಕ ಭೀಮಣ್ಣ ನಾಯ್ಕರ ಜೊತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವ್ಕರ್, ಉಪಕೃಷಿ ನಿರ್ದೇಶಕ ನಟರಾಜ್, ಪ್ರತಿಭಾ ಜಿ ಎಸ್, ಕೆವಿಕೆ ವಿಜ್ಞಾನಿ ರೂಪಾ ಪಾಟೀಲ, ಡಾ ಯಶಸ್ವಿನಿ, ಅರಣ್ಯ ವಿದ್ಯಾಲಯದ ಡಾ ಪ್ರಭುದೇವ ಮೊದಲಾದವರು ಖಾದ್ಯಗಳನ್ನು ಸವಿದು ಖುಷಿಪಟ್ಟರು.

ShareSendTweetShare
Previous Post

ಗೋವಾದ ಕ್ರಿಮಿನಲ್’ಗೆ ಕಾರವಾರದಲ್ಲಿ ಮನೆ!

Next Post

ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

Next Post

ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

ಯಕ್ಷಶ್ರೀ | ಕಲಾವಿದರ ಸಮಾಗಮ.. ಜೊತೆಗೆ ಸನ್ಮಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.