ಶಿರಸಿ: ಸುಶ್ರಾವ್ಯ ಸಂಗೀತ ಟ್ರಸ್ಟಿನ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ 29ರ ಭಾನುವಾರ ನಡೆಯಲಿದೆ. ಅಂದು ಮಧ್ಯಾಹ್ನ 3.30ಕ್ಕೆ ನೆಮ್ಮದಿ ಆವರಣದಲ್ಲಿ ಸಭಾ ಕಾರ್ಯಕ್ರಮ ಶುರುವಾಗಲಿದೆ.
ವಿದ್ಯಾಲಯದ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮ ಈ ವೇಳೆ ನಡೆಯಲಿದೆ. ಸಂಗೀತ ಕಲಾವಿದೆ ಸಂಜನಾ ಭಟ್ ಬೆಂಗಳೂರು ಅವರಿಂದ ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ಸುಶ್ರಾವ್ಯ ಸಂಗೀತ ವಿದ್ಯಾಲಯದ ಶಿಕ್ಷಕಿ ಭವ್ಯಾ ಭಟ್ ಅವರ ಗಾಯನವೂ ನಡೆಯಲಿದೆ. ಮಂಜುನಾಥ ಮೋಟಿನ್ಸರ್, ದಿನೇಶ ಹೆಗಡೆ ಗಿಳಿಗುಂಡಿ ಹಾಗೂ ಉನ್ನತಿ ಕಾಮತ್ ತಬಲಾ-ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಹೋರಾಟಗಾರ ಅನಂತಮೂರ್ತಿ ಹೆಗಡೆ ಸಭೆ ಉದ್ಘಾಟಿಸಲಿದ್ದಾರೆ. ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆಯ ಡಾ ರಮೇಶ್ ಹೆಗಡೆ ಆಗಮಿಸಲಿದ್ದಾರೆ.
ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ!
.




