ಕುಮಟಾ: ತರಕಾರಿ ಖರೀದಿಗೆ ಬರುವ ಜನರನ್ನು ಕರೆದು ಜೂಜಾಟ ಆಡುವಂತೆ ಪ್ರೇರೇಪಿಸುತ್ತಿದ್ದ ದತ್ತಾತ್ರೇಯ ಪಟಗಾರ’ರಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಮಟ್ಕಾ ಆಡಿಸಿ ಆತ ಸಂಗ್ರಹಿಸಿದ್ದ 1100ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಡಿ 25ರ ಸಂಜೆ ಕುಮಟಾ ಹೊನ್ಮಾವಿನ ದತ್ತಾತ್ರೇಯ ಪಟಗಾರ ಸಂತೆ ಮಾರುಕಟ್ಟೆ ಬಳಿ ನಿಂತಿದ್ದ. ಅಲ್ಲಿ ಹೋಗಿ-ಬರುವವರನ್ನು ಪದೇ ಪದೇ ಮಾತನಾಡಿಸುತ್ತಿದ್ದ. `ಮಟ್ಕಾ ಆಡಿ, ಶ್ರೀಮಂತರಾಗಿ’ ಎಂದು ಆತ ಕಾನೂನುಬಾಹಿರ ಆಟದ ಬಗ್ಗೆ ಪ್ರಚಾರ ಮಾಡುತ್ತಿದ್ದ. ಪಿಎಸ್ಐ ರವಿ ಗುಡ್ಡಿ ಆತನ ಚಲನ-ವಲನವನ್ನು ದೂರದಿಂದಲೇ ನೋಡುತ್ತಿದ್ದರು.
ದತ್ತಾತ್ರೇಯ ಪಟಗಾರ ಮಟ್ಕಾ ಆಡಿಸುತ್ತಿರುವುದು ಖಚಿತವಾದ ಹಿನ್ನಲೆ ತಮ್ಮ ತಂಡದೊoದಿಗೆ ದಾಳಿ ನಡೆಸಿದರು. ಆಗ, ಆತ ಜನರಿಂದ ಸಂಗ್ರಹಿಸಿದ ಹಣ, ಮಟ್ಕಾ ಚೀಟಿಗಳು ಸಿಕ್ಕಿದವು. ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.




