ಶಿರಸಿ: ಜಾನ್ಮನೆ ವಲಯ ಅರಣ್ಯದ ಸರಗುಪ್ಪದ ಬಣಗಾಂವ್ ಪ್ರದೇಶದಲ್ಲಿ ಚಿರತೆ ಸಾವನಪ್ಪಿದೆ.
ಅಂದಾಜು ಎಂಟು ವರ್ಷದ ಚಿರತೆ ಇದಾಗಿದೆ. ಚಿರತೆ ಸಾವನಪ್ಪಿದ ವಿಷಯ ತಿಳಿದು ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆದ ನಂತರ ಚಿರತೆಯ ಅಂತ್ಯ ಸಂಸ್ಕಾರ ನಡೆಸಿದರು.
ಶಿರಸಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಹಾಗು ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಹರೀಶ ಸಿ ಎನ್ ಸಮ್ಮುಖದಲ್ಲಿ ಪಶುವೈದ್ಯ ಡಾ ಪ್ರಶಾಂತ ಮರಣೋತ್ತರ ಪರೀಕ್ಷೆ ನಡೆಸಿದರು. ಜಾನ್ಮನೆ ಉಪವಲಯ ಅರಣ್ಯಾಧಿಕಾರಿ ಉಷಾ ರಾಜು ಕಬ್ಬೆರ್, ಸರಗುಪ್ಪ ಶಾಖೆಯ ಉಪವಲಯ ಅರಣ್ಯಾದಿಕಾರಿ ವಿನಯಕುಮಾರ ಶಿವಣಗಿ ಅಂತ್ಯಕ್ರಿಯೆ ಮಾಡಿದರು.




