ಸಿದ್ದಾಪುರ: ಬಿಳಗಿ ಗ್ರಾಮದ ಶಾಂತರಾಮ ನಾಯ್ಕ ಅವರ ಮನೆ ಆವರಣದಲ್ಲಿದ್ದ 50 ಅಡಿ ಆಳದ ಬಾವಿಗೆ ಎತ್ತು ಬಿದ್ದಿದೆ. ಈ ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಆ ಎತ್ತನ್ನು ಮೇಲೆತ್ತಿ ಬದುಕಿಸಿದರು!
ಅಲ್ಲಿ-ಇಲ್ಲಿ ಮೇಯುತ್ತಿದ್ದ ಎತ್ತು ಶಾಂತರಾಮ ನಾಯ್ಕ ಅವರ ಮನೆ ಅಂಗಳಕ್ಕೆ ಪ್ರವೇಶಿಸಿತ್ತು. ಅಲ್ಲಿನ ನೆಲ ಬಾವಿಯಲ್ಲಿ ಬಿದ್ದು ಹೊರಳಾಡಿತು. ಈ ವಿಷಯ ಅರಿತ ಮನೆಯವರು ನೆರೆ ಹೊರೆಯವರಿಗೆ ಸುದ್ದಿ ಮುಟ್ಟಿಸಿದರು. ಅಲ್ಲಿದ್ದ ಒಬ್ಬರು ಅಗ್ನಿಶಾಮಕ ದಳದವರನ್ನು ನೆನಪಿಸಿ, ಫೋನ್ ಮಾಡಿದರು.
ತಕ್ಷಣ ಬಂದ ಅಗ್ನಿಶಾಮಕ ಸಿಬ್ಬಂದಿ ಬಾವಿಯನ್ನು ಪರಿಶೀಲಿಸಿದರು. ಸಾರ್ವಜನಿಕರ ಸಹಕಾರವನ್ನು ಪಡೆದು ಕೆಳಗೆ ಹಗ್ಗ ಇಳಿಸಿದರು. ಇಬ್ಬರು ಬಾವಿ ಒಳಗೆ ಇಳಿದು ಎತ್ತಿಗೆ ಹಗ್ಗ ಕಟ್ಟಿದರು. ಅಗ್ನಿಶಾಮಕ ಸಿಬ್ಬಂದಿ ಮಾಸ್ತಿ ಗೊಂಡ, ನಾಗರಾಜ ಪಟಗಾರ, ಎಂ ಚಂದ್ರಾ ನಾಯ್ಕ, ಪ್ರಮೋದ ಜೋಗಳೇಕರ ಸೇರಿ ಎತ್ತನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಕಿರಣ್ ಕುಮಾರ ನಾಯ್ಕ, ವಾಸುದೇವ ವಾಲಿಕಾರ ಜೊತೆ ಗ್ರಾಮಸ್ಥರು ಸೇರಿ ಹಗ್ಗವನ್ನು ಎಳೆದರು.
ಪರಿಣಾಮ ಬಾವಿಯಲ್ಲಿದ್ದ ಎತ್ತು ಮೇಲೆದ್ದು ಹೊರಟಿತು.




