ಜೊಯಿಡಾ: 75 ವರ್ಷದ ಗಣಪತಿ ಬಾಂದೇಕರ್ ಕಾಡಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಈ ವಯಸ್ಸಿನಲ್ಲಿ ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಜೊಯಿಡಾ ನಂದಿಗದ್ದೆಯ ಗಣಪತಿ ಬಾಂದೇಕರ್ ರೈತರಾಗಿದ್ದು, ಇಳಿ ವಯಸ್ಸಿನಲ್ಲಿಯೂ ದುಡಿಯುತ್ತಿದ್ದರು. ಡಿ 26ರ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದರು. ಸಂಜೆ ಆದರೂ ಮರಳಿರಲಿಲ್ಲ. ಕುಟುಂಬದವರು ಸಂಬAಧಿರಲ್ಲಿ ವಿಚಾರಿಸಿದರೂ ಅವರ ಸುಳಿವಿರಲಿಲ್ಲ.
ಈ ನಡುವೆ ಗಣಪತಿ ಅವರ ಸೊಸೆ ವಿನುತಾ ಕಾಡಿಗೆ ಹೋದಾಗ ಅಲ್ಲಿ ಅವರು ಮರಕ್ಕೆ ನೇಣು ಹಾಕಿದನ್ನು ನೋಡಿ ಬೆದರಿದರು. ಕೂಡಲೇ ಮನೆಗೆ ಬಂದ ವಿನುತಾ ತಮ್ಮ ಪತಿ ವಿದ್ಯಾಧರ ಬಾಂದೇಕರ್ ಅವರಿಗೆ ವಿಷಯ ತಿಳಿಸಿದರು. ಅಲ್ಲಿಗೆ ಹೋದ ವಿದ್ಯಾಧರ್ ಅವರು ತಂದೆಯನ್ನು ಮರದಿಂದ ಇಳಿಸಿದರು. ಆದರೆ, ಅವರು ಬದುಕಿರಲಿಲ್ಲ.




