ಕುಮಟಾ: ಖ್ಯಾತ ಕ್ರಿಕೆಟ್ ಆಟಗಾರ ವಿ ವಿ ಎಸ್ ಲಕ್ಷಣ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಗೋಕರ್ಣದಲ್ಲಿ ಅವರು ಆತ್ಮಲಿಂಗ ದರ್ಶನಪಡೆದು ಪೂಜೆ ಸಲ್ಲಿಸಿದರು.
ಮಹಾಬಲೇಶ್ವರ ದೇವಾಲಯದಲ್ಲಿ ಅವರು ಕುಟುಂಬದವರ ಜೊತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಇದಕ್ಕೂ ಮೊದಲು ಗಣಪತಿ ಮಂದಿರಕ್ಕೆ ತೆರಳಿ ಪೂಜೆ ಮಾಡಿದರು. ಆತ್ಮಲಿಂಗ ಪೂಜೆ ನಂತರ ದೇವಾಲಯದವರು ಅವರಿಗೆ ಪ್ರಸಾದ ವಿತರಿಸಿದರು.
ಅರ್ಚಕ ಬದ್ರಿ ಅಡಿ ಪೂಜಾ ಕಾರ್ಯ ನೆರವೇರಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹೇಶ ಹಿರೇಗಂಗೆ ಉಪಸ್ಥಿತರಿದ್ದರು.




