ಹೊನ್ನಾವರ: ಕಳೆದ ಎಂಟು ವರ್ಷದಿಂದ ಮನೆಗೆ ಹೋಗದ ಸುರೇಶ ಮೊಗವೀರ ಸಾವಿನ ನಂತರ ಶವವಾಗಿ ಮರಳಿದ್ದಾರೆ.
ಉಡುಪಿಯ ಬೈಂದೂರಿನ ಸುರೇಶ ಮೊಗವೀರ (37) ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸರಾಯಿ ಸೇವನೆಯ ವ್ಯಸನಕ್ಕೆ ಅಂಟಿಕೊAಡಿದ್ದ ಅವರು 29ನೇ ವಯಸ್ಸಿನಲ್ಲಿ ಮನೆ ಬಿಟ್ಟಿದ್ದರು. ಬೇರೆ ಬೇರೆ ಊರುಗಳಲ್ಲಿ ವೃತ್ತಿ ಮಾಡಿ ಬದುಕು ಕಟ್ಟಿಕೊಂಡಿದ್ದರು.
ಡಿ 16ರಂದು ಅನಾರೋಗ್ಯಕ್ಕೆ ಒಳಗಾದ ಸುರೇಶ ಮೊಗವೀರ ಅವರನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಅವರು ಡಿ 27ರ ನಸುಕಿನಲ್ಲಿ ಭೂ ಲೋಕದ ಯಾತ್ರೆ ಮುಗಿಸಿದರು.
ಸುರೇಶ ಅವರ ದೊಡ್ಡಪ್ಪನ ಮಗ ಮಹಾದೇವ ಮೊಗೇರ್ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.




