6
  • Latest

ರಂಗೋಲಿ ಜಾತ್ರೆಗೆ ಜನವೋ ಜನ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ರಂಗೋಲಿ ಜಾತ್ರೆಗೆ ಜನವೋ ಜನ!

AchyutKumar by AchyutKumar
in ಲೇಖನ

ಎಲ್ಲಾ ಕಡೆ ಜಾತ್ರೆ ಅಂದರೆ ಜನ ಜಂಗುಳಿ, ದೇವರ ಮೆರವಣಿಗೆ, ವಿಶೇಷ ಪೂಜೆ, ಆಟಿಕೆ ಸಾಮಾನುಗಳ ಆರ್ಭಟ, ತೂಗುಯ್ಯಾಲೆ, ಸರ್ಕಸ್ ಸೇರಿ ವಿವಿಧ ಮನರಂಜನೆಗಳು ಸಾಮಾನ್ಯ. ಆದರೆ, ಕಾರವಾರದ ಮಾರುತಿ ಮಂದಿರದ ಜಾತ್ರೆ ಇವೆಲ್ಲಕ್ಕಿಂತ ವಿಭಿನ್ನ. ಈ ಜಾತ್ರೆಯಲ್ಲಿ ರಂಗೋಲಿ ಚಿತ್ತಾರ ಅರಳುವುದೇ ವಿಶೇಷ!

ADVERTISEMENT

ಶನಿವಾರ ರಾತ್ರಿ ಕಾರವಾರದ ಮಾರುತಿ ದೇವರ ಜಾತ್ರೆ ಅದ್ಧೂರಿಯಾಗಿ ನಡೆದಿದ್ದು, ಬಣ್ಣ ಬಣ್ಣದ ರಂಗೋಲಿಗಳ ಕಲರವ ಕಾಣಿಸಿತು. 200ಕ್ಕೂ ಅಧಿಕ ರಂಗೋಲಿಗಳು ಬೀದಿ ಬೀದಿಯಲ್ಲಿ ಗಮನಸೆಳೆದವು. ರಂಗೋಲಿ ನೋಡುವುದಕ್ಕಾಗಿ ಸಾವಿರಾರು ಜನ ಆಗಮಿಸಿದ್ದರು.  ಚಂದದ ರಂಗೋಲಿಗಳ ವರ್ಣನೆ. ಎಲ್ಲಿ ನೋಡಿದರೂ ರಂಗೋಲಿ ಕುರಿತಾಗಿಯೇ ಮಾತು ಕೇಳಿಸಿದವು.

ಪ್ರತಿ ವರ್ಷ ನಡೆಯುವ ಮಾರುತಿ ಗಲ್ಲಿಯ ಜಾತ್ರೆ ರಂಗೋಲಿಗಳಿಮದಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ದೇವರ ಪೂಜೆ – ವಿಧಿ ವಿಧಾನಗಳು ಉಳಿದ ಜಾತ್ರೆಗಳ ಹಾಗೇ ಇದ್ದರೂ ರಂಗೋಲಿ ಬಿಡಿಸುವಿಕೆಗೆ ಇಲ್ಲಿ ಹೆಚ್ಚಿನ ಮಹತ್ವ. ಹೀಗಾಗಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ರಂಗೋಲಿ ಬಿಡಿಸುವವರಿದ್ದಾರೆ. ಖ್ಯಾತ ಕಲಾವಿದರನ್ನು ಕರೆಯಿಸಿ ರಂಗೋಲಿ ಬಿಡಿಸಲಾಗುತ್ತದೆ.

Advertisement. Scroll to continue reading.

ಜಾತ್ರೆಯಲ್ಲಿ ರಂಗೋಲಿ ಸಂಪ್ರದಾಯ ಐದು ದಶಕಗಳಿಂದ ನಡೆದು ಬಂದಿದ್ದು, ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ-ಪ್ರಚಾರವನ್ನು ಹೆಚ್ಚಿಸಿಕೊಂಡಿದೆ. ರಂಗೋಲಿಗಳಿoದ ಕಂಗೊಳಿಸುವ ಮಾರುತಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಹೆಸ್ಕಾಂ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಈ ವೇಳೆ ವಾಹನ ಸಂಚಾರ ನಿಷಿದ್ಧ!

Advertisement. Scroll to continue reading.

ಈ ರಸ್ತೆಗಳ ಎಡುಬದಿಯಲ್ಲಿರುವ ಮನೆಯವರು ದೀಪಾಲಂಕಾರದಿoದ ಊರನ್ನು ಶೃಂಗರಿಸುತ್ತಾರೆ. ಮನೆಯ ಮುಂದೆ ಬಣ್ಣ ಬಣ್ಣದ ಪುಡಿಗಳಿಂದ ಕಲಾವಿದರ ಕಲ್ಪನೆಗೆ ತಕ್ಕಂತೆ ಕಲಾಕೃತಿಗಳು ಅರಳುತ್ತವೆ. ಏಕದಳ-ದ್ವಿದಳ ಧಾನ್ಯಗಳು, ಹೂವು ಎಲೆಗಳು, 3ಡಿ ರಂಗೋಲಿಗಳನ್ನು ಚಿತ್ರಿಸಿದ್ದರು. ಹಣ್ಣು ತರಕಾರಿ, ಉಪ್ಪು ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಗಳು ಅಲ್ಲಿದ್ದವರು.

ವ್ಯಕ್ತಿ ಚಿತ್ರಣಗಳು, ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ರಂಗೋಲಿಗಳು ಸಾರಿದವು. ಬೇರೆ ಬೇರೆ ಭಾಗದ ಕಲಾವಿದರು ಆಗಮಿಸಿ ರಂಗೋಲಿ ಬಿಡಿದರು. ಅನೇಕ ಮನೆಯವರು ತಮ್ಮ ಮನೆ ಮುಂದೆ ಖ್ಯಾತ ಕಲಾವಿದರನ್ನು ಕರೆಯಿಸಿ ಕಲಾವಿದರ ಚಿತ್ರ ಬಿಡಿಸಿದರು.

Previous Post

ಮನೆ – ತೋಟ | ಪ್ರತಿಯೊಬ್ಬರ ಸುರಕ್ಷತೆ ಈ ಕ್ಯಾಮರಾ ಹೊಣೆ!

Next Post

ತ್ರಿಬಲ್ ರೈಡ್ | ಬೈಕಿಗೆ ಗುದ್ದಿದ ಬಸ್ಸು: ಇಬ್ಬರ ಸಾವು-ಒಬ್ಬ ಗಂಭೀರ

Next Post

ತ್ರಿಬಲ್ ರೈಡ್ | ಬೈಕಿಗೆ ಗುದ್ದಿದ ಬಸ್ಸು: ಇಬ್ಬರ ಸಾವು-ಒಬ್ಬ ಗಂಭೀರ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ