ಕಾರವಾರ: ಗೋವಾ – ಕಾರವಾರ ಗಡಿಯಲ್ಲಿ ಕಾಡು ಹಂದಿ ಕಾಟ ಜೋರಾಗಿದೆ. ಮೊನ್ನೆ ರಾತ್ರಿ ಬೈಕಿಗೆ ಹಂದಿ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ!
ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುವ ತರ್ಲೆಭಾಗದ ಜನಾರ್ಧನ ಠಾಕೇಕರ್ ಅವರು ಡಿ 27ರಂದು ಗೋವಾಗೆ ಹೋಗಿದ್ದರು. ರಾತ್ರಿ 9.30ಕ್ಕೆ ಅವರು ಬೈಕಿನಲ್ಲಿ ಕಾರವಾರದ ಕಡೆ ಮರಳುತ್ತಿದ್ದರು. ವಿಜಯ ಅಂಬಿಗ ಸಹ ಅವರ ಜೊತೆಯಿದ್ದರು.
ಗೋವಾ ಗಡಿ ದಾಡಿ ಕಾರವಾರ ಪ್ರವೇಶಿಸಿದ ನಂತರ ಜನಾರ್ಧನ ಅವರು ಬೈಕಿನ ವೇಗ ಹೆಚ್ಚಿಸಿದರು. ಬೇಗ ಮನೆ ಸೇರುವ ಗಡಿಬಿಡಿಯಲ್ಲಿದ್ದ ಅವರ ಬೈಕಿಗೆ ಘೋಟ್ನೇಭಾಗದ ಬಳಿ ಹಂದಿಯೊAದು ಗುದ್ದಿತು. ನಂತರ ಆ ಹಂದಿ ಕಾಡು ಸೇರಿತು.
ಬೈಕಿಗೆ ಹಂದಿ ಗುದ್ದಿದ ಪರಿಣಾಮ ಜನಾರ್ಧನ ಅವರಿಗೆ ಬೈಕ್ ಮೇಲಿನ ನಿಯಂತ್ರಣ ತಪ್ಪಿ ತು. ಬೈಕಿನ ಜೊತೆ ಜನಾರ್ಧನ ಹಾಗೂ ಅವರ ಜೊತೆಗಿದ್ದ ವಿಜಯ ಅಂಬಿಗ ಸಹ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ವಿನೋದ ಅಂಬಿಗ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನಡೆಯುತ್ತಿದೆ.
ಈ ಎಲ್ಲ ಘಟನಾವಳಿಗಳ ಬಗ್ಗೆ ಕೋಡಿಭಾಗದ ರವಿ ಅಂಬಿಗ ಅವರ ಪೊಲೀಸ್ ದೂರು ನೀಡಿದ್ದಾರೆ.




