ಕುಮಟಾ: ಹೊಸ ಹರವಟ್ಟಾ ರೈಲ್ವೆ ಸೇತುವೆ ಬಳಿ ನಡೆಯುತ್ತಿದ್ದ ಮಟ್ಕಾ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.
ಕುಮಟಾ ಕುಡ್ತಗಿಬೈಲ್’ನ ಕೂಲಿಯಾಳು ನಾಗರಾಜ ನಾಯ್ಕ ಇಲ್ಲಿ ಮಟ್ಕಾ ಆಡಿಸುತ್ತಿದ್ದರು. ಹೋಗಿ-ಬರುವ ಜನರನ್ನು ಮಾತನಾಡಿಸಿ ಜೂಜಾಟಕ್ಕಾಗಿ ಅವರು ಹಣ ಸಂಗ್ರಹಿಸುತ್ತಿದ್ದರು. ಇದನ್ನು ಅರಿತ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಗೌಡರ್ ನಾಗರಾಜ ನಾಯ್ಕರ ಪೂರ್ವಾಪರ ವಿಚಾರಿಸಿದರು.
ಡಿ 27ರ ರಾತ್ರಿ ಮಟ್ಕಾ ಆಡಿಸುತ್ತಿದ್ದಾಗಲೇ ನಾಗರಾಜ ನಾಯ್ಕರು ಸಿಕ್ಕಿ ಬಿದ್ದರು. ಜನರಿಂದ ಸಂಗ್ರಹಿಸಿದ್ದ 760ರೂ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು. ನಾಗರಾಜ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.




