ಜೊಯಿಡಾ: ಕಿರಾಣಿ ಅಂಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಸರಾಯಿ ಮಾರಾಟವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿರಾಣಿ ಅಂಗಡಿ ಮುಂದಿನ ಕಟ್ಟೆ ಮೇಲೆ ಮದ್ಯ ಸೇವಿಸುತ್ತಿರುವಾಗಲೇ ದಾಳಿ ನಡೆಸಿ ಪೊಲೀಸರು ಅಂಗಡಿ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೊಯಿಡಾ ಜಗಲಪೇಟೆಯ ನಾರಾಯಣ ಗಾವಡೆ ಫಾರೆಸ್ಟ್ ಡಿಪೋ ಎದುರು ಕಿರಾಣಿ ಅಂಗಡಿ ನಡೆಸುತ್ತಾರೆ. ಅಂಗಡಿ ಮುಂದಿನ ಕಟ್ಟೆ ಮೇಲೆ ಕೂತವರಿಗೆ ಅವರು ಸರಾಯಿ ಸರಬರಾಜು ಮಾಡುತ್ತಾರೆ. ಆದರೆ, ಸರಾಯಿ ಮಾರಾಟ ಹಾಗೂ ಸರಬರಾಜಿಗೆ ಅವರು ಅನುಮತಿ ಪಡೆದಿಲ್ಲ.
ಕಿರಾಣಿ ಅಂಗಡಿಯಲ್ಲಿ ಸರಾಯಿ ದಾಸ್ತಾನಿಗೂ ಅವಕಾಶವಿಲ್ಲ. ಈ ಬಗ್ಗೆ ಅರಿವಿದ್ದರೂ ನಾರಾಯಣ ಗಾವಡೆ ಅತ್ಯಧಿಕ ಹಣ ಸಂಪಾದಿಸುವುದಕ್ಕಾಗಿ ಅಡ್ಡದಾರಿ ಹಿಡಿದಿದ್ದರು. ಡಿ 28ರ ಸಂಜೆ ಅವರು ಅಂಗಡಿ ಮುಂದೆ ಬಂದ ವ್ಯಸನಿಗಳಿಗೆ ಆದರಾತಿಥ್ಯ ನಡೆಸುತ್ತಿದ್ದಾಗ ರಾಮನಗರ ಪಿಎಸ್ಐ ಬಸವರಾಜ ಮಬನೂರು ದಾಳಿ ಮಾಡಿದರು. ಅಕ್ರಮದ ಬಗ್ಗೆ ಅರಿವು ಮೂಡಿಸಿ ಪ್ರಕರಣವನ್ನು ದಾಖಲಿಸಿದರು.




