6
  • Latest

ವರ್ಷದ ಕೊನೆಗೆ ದುಖಃದ ವಾರ್ತೆ: ದುಡಿದು ತಿನ್ನುವವರ ಕನಸು ನುಚ್ಚು ನೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ವರ್ಷದ ಕೊನೆಗೆ ದುಖಃದ ವಾರ್ತೆ: ದುಡಿದು ತಿನ್ನುವವರ ಕನಸು ನುಚ್ಚು ನೂರು!

AchyutKumar by AchyutKumar
December 31, 2024
in ವಿಡಿಯೋ, ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ವೃದ್ಧ ತಾಯಿಯ ಆರೈಕೆ, ಮಗು ಆಗಮನದ ಸಂತಸದಲ್ಲಿದ್ದ ಮೂವರು ಶರಾವತಿ ಸೇತುವೆ ಮೇಲೆ ಹೆಣವಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ರೂಪದಲ್ಲಿ ಬಂದ ಜವರಾಯ ಆ ಮೂವರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಕುಟುಂಬದವರ ಆಕಂದ್ರನಕ್ಕೆ ಅಲ್ಲಿದ್ದವರೆಲ್ಲರೂ ಕಣ್ಣೀರಾದರು.

ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ (34) ಅತ್ಯಂತ ಸಾಹಸಿಗರಾಗಿದ್ದರು. ಕೂಲಿ ಮಾಡಿ ಕಾಪಾಡಿಕೊಂಡಿದ್ದ ಕಾಸಿನ ಜೊತೆ ಸ್ವಲ್ಪ ಸಾಲ ಮಾಡಿ ಬುಲೆರೋ ಖರೀದಿಸಿದ್ದರು. ಅದರ ಬಾಡಿಗೆಯಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆರು ತಿಂಗಳ ಹಿಂದೆ ಮದುವೆಯಾಗಿದ್ದ ರಾಘವೇಂದ್ರ ಗೌಡ ಅವರು ತಾಯಿಯಾಗಲಿರುವ ಪತ್ನಿ ಹಾಗೂ ವೃದ್ಧ ತಾಯಿಯನ್ನು ಬಿಟ್ಟು ಈ ಲೋಕ ತೊರೆದಿದ್ದಾರೆ.

ADVERTISEMENT
ADVERTISEMENT

ಇನ್ನೂ 22 ವರ್ಷದ ನಾಥಗೇರಿಯ ರಮೇಶ ನಾಯ್ಕ ಈಚೆಗೆ ಪದವಿ ಪೂರೈಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ವಿವಿಧ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಫಲಿತಾಂಶಕ್ಕಾಗಿ ಕಾದಿದ್ದರು. ವರ್ಷದ ಹಿಂದೆ ಪೆಟ್ಟು ಮಾಡಿಕೊಂಡ ತಂದೆಯ ಆರೈಕೆಯಲ್ಲಿ ತೊಡಗಿದ್ದ ರಮೇಶ ನಾಯ್ಕ ಖಾಸಗಿ ಕೆಲಸ ಸಿಕ್ಕರೂ ಹೋಗಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಕ್ಕಿ ಉನ್ನತ ಹುದ್ದೆಗೆ ಹೋಗುವ ಕನಸು ಕಂಡಿದ್ದ ರಮೇಶ ನಾಯ್ಕ ಇನ್ನಿಲ್ಲ.

Advertisement. Scroll to continue reading.

ಸಂಶಿ-ಕುದ್ರಿಗಿಯ ಗೌರೀಶ ನಾಯ್ಕರ (25) ಕಥೆ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಅವರ ಮನೆ ಪರಿಸ್ಥಿತಿಯಂತೂ ಶೋಚನೀಯ. ತಂದೆ ಸಾವಿನ ನಂತರ ತಾಯಿಗೆ ಗೌರೀಶನೇ ಆಸರೆಯಾಗಿದ್ದು, ಮಗನ ದುಡಿಮೆಯಿಂದ ಕುಟುಂಬ ನಡೆಯುತ್ತಿತ್ತು. ಎರಡು ವರ್ಷದ ಹಿಂದೆ ಮುಗ್ವಾದ ಆರೋಳ್ಳಿ ಬಳಿ ನಡೆದ ಅಪಘಾತದಲ್ಲಿ ಗೌರೀಶನ ಜೊತೆಯಿದ್ದವರು ಸಾವನಪ್ಪಿದರು. ಗೌರೀಶ ಕೂದಲೆಳೆ ಅಂತರದಲ್ಲಿ ಬದುಕಿ ಬಂದಿದ್ದು ದೊಡ್ಡ ಪವಾಡವಾಗಿತ್ತು. ಆದರೆಮ ಬೆನ್ನು ಬಿಡದ ವಿಧಿ ಎರಡು ವರ್ಷದ ನಂತರ ಶರಾವತಿ ಸೇತುವೆ ಮೇಲೆ ಗೌರೀಶನನ್ನು ಬಲಿ ಪಡೆಯಿತು. ಗೌರೀಶನ ತಾಯಿಯ ಗೋಳು ನೆನೆದವರ ಕಣ್ಣನ್ನು ತೇವ ಮಾಡಿತು.

Advertisement. Scroll to continue reading.

 

ಮಗನ ಸಾವಿನ ಬಗ್ಗೆ ಅರಿಯದ ತಾಯಿ ಏನಾಗಿದೆ? ಎಂದು ಕೇಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದನ್ನು ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಬೈಕಿನಿಂದ ಬಿದ್ದ ಮಹಿಳೆ ಸಾವು

Next Post

ಗೂಡಂಗಡಿ ಗೊಂದಲ | ರಿಕ್ಷಾ ಚಾಲಕರ ಪಟ್ಟು: ಅಧಿಕಾರಿಗಳಿಗೆ ಇಕ್ಕಟ್ಟು!

Next Post

ಗೂಡಂಗಡಿ ಗೊಂದಲ | ರಿಕ್ಷಾ ಚಾಲಕರ ಪಟ್ಟು: ಅಧಿಕಾರಿಗಳಿಗೆ ಇಕ್ಕಟ್ಟು!

ಡಾಕ್ಟರ್ ವಿರುದ್ಧ ಮತ್ತೊಂದು ದೂರು: ರೋಗಿ ಹೇಳಿದ ಕಥೆಯೇ ಬೇರೆ!

ಗ್ಯಾಸ್ ಸಿಲೆಂಡರ್ ಸೋರಿಕೆ: ಹೊತ್ತಿ ಉರಿದ ಹೊಟೇಲ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.