6
  • Latest

ಕಾಗೇರಿ ಮನೆಯಲ್ಲಿ ಕೊನೆಕೊಯ್ಲು: ಹಗ್ಗ ಹಿಡಿಯಲು ಹೋಗಿದ್ದು ಸಂಸದರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಕಾಗೇರಿ ಮನೆಯಲ್ಲಿ ಕೊನೆಕೊಯ್ಲು: ಹಗ್ಗ ಹಿಡಿಯಲು ಹೋಗಿದ್ದು ಸಂಸದರು!

AchyutKumar by AchyutKumar
in ವಿಡಿಯೋ

ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತೋಟದಲ್ಲಿ ಬುಧವಾರ ಕೊನೆ ಕೊಯ್ಲು. ಹೀಗಾಗಿ ಬೆಳಗ್ಗಿನ ಒಂದು ಹೊತ್ತು ಅವರು ಹಗ್ಗ ಹಿಡಿದರು!

ADVERTISEMENT

ಬಿಡುವಿಲ್ಲದ ಕೆಲಸದ ನಡುವೆಯೂ ಸಂಸದ ಕಾಗೇರಿ ಬುಧವಾರ ತಮ್ಮ ಮನೆ ಕೆಲಸದವರೊಂದಿಗೆ ಕಾಲ ಕಳೆದರು. ಬಿಳಿ ಲುಂಗಿ-ಟೀ ಶರ್ಟ ಧರಿಸಿ ತೋಟಕ್ಕೆ ಇಳಿದ ವಿಶ್ವೇಶ್ವರ ಹೆಗಡೆ ಅವರು ಮೊದಲು ತೋಟ ಸುತ್ತಾಡಿದರು. ನಂತರ ಅಡಿಕೆ ಮರದ ಕೆಳಗೆ ನಿಂತು ಹಗ್ಗ ಹಿಡಿದರು. ಮರ ಏರಿದ್ದ ಕೊನೆ ಗೌಡನಿಗೆ `ನಿಧಾನವಾಗಿ ಕೊನೆ ಕೆಳಗೆ ಬಿಡು’ ಎಂದು ಸೂಚಿಸಿ ಹಗ್ಗದ ಮೂಲಕ ಕೊನೆಯನ್ನು ಇಳಿಸಿಕೊಂಡರು.

ಕಾಗೇರಿಯವರ ಮನೆಯಲ್ಲಿ ಮೂವರು ಕೊನೆ ಗೌಡರು ಬುಧವಾರ ಕೊನೆ ಕೊಯ್ಲು ನಡೆಸಿದರು. ಇಬ್ಬರು ದೋಟಿ ಹಿಡಿದು ಅಡಿಕೆ ಕೊಯ್ಲು ಮಾಡಿದರು. ಅವರೆಲ್ಲರನ್ನು ಕಾಗೇರಿಯವರು ಮಾತನಾಡಿಸಿದರು. 11 ಗಂಟೆ ವೇಳೆಗೆ ಅವರ ಜೊತೆ ಅವಲಕ್ಕಿ-ಮಜ್ಜಿಗೆಯ ಆಸ್ರಿಗೆ ಕುಡಿದರು.

Advertisement. Scroll to continue reading.

ಅವಿಭಕ್ತ ಕುಟುಂಬದಲ್ಲಿ ವಾಸವಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಳೆದ ವಿಧಾನಸಭಾ ಚುನಾವಣೆ ನಂತರ ಮನೆಯಲ್ಲಿದ್ದರು. ಸಂಸದರಾಗುವ ಮುನ್ನ ಅವರು ನಿತ್ಯ ತೋಟಕ್ಕೆ ಹೋಗುತ್ತಿದ್ದರು. ಆ ಅವಧಿಯಲ್ಲಿ ತೋಟದ ಅಭಿವೃದ್ಧಿಯನ್ನು ನಡೆಸಿದ್ದರು. `ಕೃಷಿ ಬಗ್ಗೆ ಅರಿವಿರುವ ಕಾರಣ ಕಾಗೇರಿ ಅವರಿಗೆ ತೋಟದ ಕೆಲಸ ಹೊಸದಲ್ಲ’ ಎಂದು ಅವರ ಆಪ್ತರು ಹೇಳಿದರು.
ಕಾಗೇರಿ ಮನೆ ಕೊನೆ ಕೊಯ್ಲು ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
Previous Post

PSI ಪರೀಕ್ಷೆ: ಮೂವರ ಬದುಕು ಬದಲಿಸಿದ ಶ್ರೀರಾಮ

Next Post

ಜಿಲ್ಲಾಧಿಕಾರಿ ಅಂಗಳಕ್ಕೆ ಅಂಕೋಲೆಯ ಗೂಡಂಗಡಿ ವಿವಾದ!

Next Post

ಜಿಲ್ಲಾಧಿಕಾರಿ ಅಂಗಳಕ್ಕೆ ಅಂಕೋಲೆಯ ಗೂಡಂಗಡಿ ವಿವಾದ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ