ಕಾರವಾರ: ಹಬ್ಬುವಾಡ ಬಳಿಯ ಕುಂಠಿ ಮಹಾಮಾಯಾ ದೇವಾಲಯ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಯಲ್ಲಪ್ಪ ಕನಸಾವಿ ಗಾಯಗೊಂಡಿದ್ದಾರೆ. ಬೈಕಿನಿಂದ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಕಿವಿಯಿಂದ ರಕ್ತ ಬಂದಿದೆ.
ದೇವಳಿವಾಡ ದುರ್ಗಾದೇವಿ ದೇವಾಲಯದ ಬಳಿ ವಾಸವಾಗಿದ್ದ ಯಲ್ಲಪ್ಪ ಕನಸಾವಿ ಅವರು ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದರು. ಜ 2ರ ಮಧ್ಯಾಹ್ನ ಅವರು ಕಾರವಾರ ಕೈಗಾ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು. ದೇವಳಿವಾಡದ ತಮ್ಮ ಮನೆ ಕಡೆ ತಲುಪಬೇಕಿದ್ದ ಅವರು ಕುಂಠಿ ಮಹಾಮಾಯಾ ದೇವಾಲಯದ ತಿರುವಿನಲ್ಲಿ ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡರು.
ಬೈಕಿನಿoದ ಬಿದ್ದ ರಭಸಕ್ಕೆ ತಲೆ ಹಿಂಭಾಗ ಗಾಯವಾಗಿದೆ. ತಲೆ ಒಳಭಾಗದಲ್ಲಿ ಸಹ ಅವರಿಗೆ ಪೆಟ್ಟಾಗಿದ್ದು, ಬಲ ಕಿವಿಯಿಂದ ರಕ್ತ ಸೋರಲು ಶುರುವಾಗಿದೆ. ಇದನ್ನು ನೋಡಿದ ಸ್ಥಳೀಯರು ಯಲ್ಲಪ್ಪ ಕನಸಾವಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸೆಂಟ್ರಿoಗ್ ಕೆಲಸ ಮಾಡುವ ಸೋನಾರವಾಡದ ಪರಶುರಾಮ ಕನಸಾವಿ ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.




