6
  • Latest

ಕಳ್ಳನ ರಕ್ಷಣೆಗಾಗಿ ಪೊಲೀಸರ ಮೇಲೆ ದಾಳಿ: ಏಳು ಜನರಿಂದ ನಾಲ್ವರು ಪೊಲೀಸರ ಮೇಲೆ ಹಲ್ಲೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಳ್ಳನ ರಕ್ಷಣೆಗಾಗಿ ಪೊಲೀಸರ ಮೇಲೆ ದಾಳಿ: ಏಳು ಜನರಿಂದ ನಾಲ್ವರು ಪೊಲೀಸರ ಮೇಲೆ ಹಲ್ಲೆ!

AchyutKumar by AchyutKumar
January 3, 2025
in ಸ್ಥಳೀಯ
advt advt advt
ADVERTISEMENT

ಶಿರಸಿ: ಕಳ್ಳತನ ಪ್ರಕರಣದ ಆರೋಪಿಯ ರಕ್ಷಣೆಗಾಗಿ ನಾಲ್ವರು ಮಹಿಳೆಯರು ಸೇರಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಮೂವರು ಪುರುಷರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ಹೊಡೆದಾಟದಿಂದ ಒಟ್ಟು ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಗಲಾಟೆಯ ನಡುವೆ ಮನೆಯಲ್ಲಿ ಅಡಗಿದ್ದ ಕಳ್ಳ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಹುಡುಕಾಟ ಮುಂದುವರೆದಿದೆ.

2024ರ ಡಿಸೆಂಬರ್ 22ರಂದು ಶಿರಸಿ ನಗರದಲ್ಲಿ ಕಳ್ಳತನ ನಡೆದಿದ್ದು, ಅಲ್ಲಿ ಸಿಕ್ಕ ಬೆರಳಚ್ಚು ಅನ್ವರ್ ಭಾಷಾ ಎಂಬಾತರಿಗೆ ಹೊಂದಾಣಿಕೆಯಾಗಿತ್ತು. ಈ ಹಿನ್ನಲೆ 2025ರ ಜನವರಿ 3ರಂದು ಅನ್ವರ್ ಭಾಷಾ’ನನ್ನು ವಿಚಾರಣೆಗೆ ಒಳಪಡಿಸಲು ಆತ ಅಡಗಿದ್ದ ಮನೆಗೆ ಪೊಲೀಸರು ತೆರಳಿದ್ದರು. ಆರ್‌ಟಿಓ ಕಚೇರಿ ಬಳಿಯ ಶಾಲ್ಮಲಾ ಬಡವಾಣೆ ರಸ್ತೆಯ ಮನೆಗೆ ಹೋದ ಪೊಲೀಸರು ಅಲ್ಲಿ ಅನ್ವರ್ ಭಾಷಾನ ಕುರಿತು ವಿಚಾರಿಸಿದರು. ಆಗ, ಮನೆಯಲ್ಲಿದ್ದ ಮುಬಾರಕ್ ಭಾಷಾ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕರ್ ಮೇಲೆ ಕೈ ಮಾಡಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಆ ಮನೆಯಲ್ಲಿದ್ದ ಆಬೀದ್ ಖಾನ್, ರಷೀದಾ ಶೇಖ್, ಅಪ್ರೀನ್ ಶೇಖ್, ರಫಿಯಾ ಶೇಖ್
ಅಮ್ರೀನ್ ಶೇಖ್ ಸೇರಿ ಪೊಲೀಸ್ ಸಿಬ್ಬಂದಿ ಹನುಮಂತ ಮಾಕಾಪುರ, ರಾಮಯ್ಯ ಪೂಜಾರಿ, ವಿದ್ಯಾ ನಾಯ್ಕ ಅವರನ್ನು ಥಳಿಸಿದರು. ಮಹಿಳಾ ಪೊಲೀಸ್ ಸಿಬ್ಬಂದಿ ವಿದ್ಯಾ ನಾಯ್ಕ ಅವರನ್ನು ಎಳೆದಾಡಿ ಅವರ ಸಮವಸ್ತçವನ್ನು ಈ ದುಷ್ಕರ್ಮಿಗಳು ಹರಿದರು. ಈ ಹೊಡೆದಾಟದಲ್ಲಿ ಕಳ್ಳತನದ ಆರೋಪಿ ಅನ್ವರ್ ಭಾಷಾ ಅಲ್ಲಿಂದ ಓಡಿ ಹೋಗಿದ್ದು, ಪೊಲೀಸರು ಆತನ ಹುಡುಕಾಟವನ್ನು ನಡೆಸಿದ್ದಾರೆ.

ಈ ಎಲ್ಲಾ ಘಟನಾವಳಿಗಳ ಬಗ್ಗೆ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕಕರ್ ಪೊಲೀಸ್ ಠಾಣೆಗೆ ಬಂದು ವರದಿ ಒಪ್ಪಿಸಿದ್ದು, ಪಿಎಸ್‌ಐ ರತ್ನಾ ಕುರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ತಪ್ಪಿಸಿಕೊಂಡ ಕಳ್ಳನ ಹುಡುಕಾಟವೂ ಮುಂದುವರೆದಿದೆ.

ShareSendTweetShare
ADVERTISEMENT
Previous Post

ಬಿಕ್ಷೆ ಬೇಡಿ ಸರಾಯಿ ಸೇವನೆ: ಗಾಳಿ-ಚಳಿಗೆ ವ್ಯಸನಿ ಸಾವು!

Next Post

ಮುಗಿಯದ ಕಾದಾಟ: ಹೈಟೆಕ್ ಆಸ್ಪತ್ರೆಗಾಗಿ ಅನಂತಮೂರ್ತಿ ಹೋರಾಟ!

Next Post

ಮುಗಿಯದ ಕಾದಾಟ: ಹೈಟೆಕ್ ಆಸ್ಪತ್ರೆಗಾಗಿ ಅನಂತಮೂರ್ತಿ ಹೋರಾಟ!

ಕದ್ದ ಹಣದಲ್ಲಿ ದೀಪೋತ್ಸವ ಆಚರಿಸಿದ: ಕೊಲೆಗಾರನನ್ನು ಹಿಡಿದವರಿಗೆ 25 ಸಾವಿರ ರೂ ಬಹುಮಾನ!

ಜೀವಜಲಕ್ಕಾಗಿ ಏಕಾಂಗಿ ಹೋರಾಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.