ಕಾರವಾರ: ನಗರದ ಎಲ್ಲಡೆ ಬಿಕ್ಷೆ ಬೇಡಿ ಅದರಿಂದ ದೊರೆತ ಹಣದಿಂದ ಸರಾಯಿ ಸೇವಿಸಿ ಬದುಕಿದ್ದ ಹನುಮಂತಪ್ಪ ಬಗರೀಗೇರ ಅತಿಯಾದ ಕುಡಿತ, ಪಾರ್ಶವಾಯು ಹಾಗೂ ಗಾಳಿ-ಚಳಿಯಿಂದ ನಡುಗಿ ಸಾವನಪ್ಪಿದ್ದಾರೆ.
ಹಾವೇರಿಯ ಹನುಮಂತಪ್ಪ ಬಗರೀಗೇರ (60) ನಂದನಗದ್ದಾದ ದೇವತಿಶೆಟ್ಟಾದಲ್ಲಿ ವಾಸವಾಗಿದ್ದರು. ಉದ್ಯೋಗವಿಲ್ಲದ ಕಾರಣ ಅವರು ಬಿಕ್ಷಾಟನೆ ಮಾಡುತ್ತಿದ್ದರು. ಬಿಕ್ಷಾಟನೆಯಿಂದ ದೊರೆತ ಹಣವನ್ನು ಪೂರ್ತಿಯಾಗಿ ಸರಾಯಿ ಅಂಗಡಿಗೆ ನೀಡುತ್ತಿದ್ದರು. ಎಲ್ಲೆಂದರಲ್ಲಿ ಮಲಗಿ ರಾತ್ರಿ ಕಳೆಯುತ್ತಿದ್ದ ಅವರು ಕಳೆದ ಎರಡು ವರ್ಷಗಳಿಂದ ಮನೆಗೂ ಹೋಗಿರಲಿಲ್ಲ. ಈ ನಡುವೆ ಪಾರ್ಶವಾಯು ರೋಗಕ್ಕೂ ತುತ್ತಾಗಿದ್ದರು.
ಜನವರಿ 2ರಂದು ಟಾಗೂರ್ ಕಡಲತೀರ ಬಳಿಯಿರುವ ಮೇಲ್ಸೆತುವೆ ಕೆಳಗೆ ಅವರು ಮಲಗಿದ್ದರು. ಅತಿಯಾದ ಕುಡಿತ, ಪಾರ್ಶವಾಯು ರೋಗ ಹಾಗೂ ಚಳಿಯಿಂದ ನಡುಗಿ ಅವರು ಸಾವನಪ್ಪಿದರು. ಅವರ ಪತ್ನಿ ಗಂಗಮ್ಮ ಅವರು ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.




