ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸರು ನಿರಂತರ ದಾಳಿ ನಡೆಸುತ್ತಿದ್ದಾರೆ. ಅದಾಗಿಯೂ ಕಾನೂನುಬಾಹಿರ ಜೂಜಾಟ ನಿಂತಿಲ್ಲ.
ಕುಮಟಾದ ಹಳೆ ಬಸ್ ನಿಲ್ದಾಣದ ಬಳಿ ಜ 2ರಂದು ಮಟ್ಕಾ ಆಡಿಸುತ್ತಿದ್ದ ಕೇಶವ ಬೇಟಿ ಗೌಡ ಹಾಗೂ ಕೇಶವ ಗಣಪತಿ ಗೌಡ ಎಂಬಾತರ ಮೇಲೆ ಪೊಲೀಸ್ ನಿರೀಕ್ಷಕ ಯೋಗೀಶ ಎಂ ಕೆ ದಾಳಿ ಮಾಡಿದ್ದಾರೆ. ಅವರ ಬಳಿಯಿದ್ದ 1440ರೂ ಹಣವನ್ನು ಅವರು ವಶಕ್ಕೆ ಪಡೆದಿದ್ದಾರೆ. ಕುಮಟಾ ಮೀನು ಮಾರುಕಟ್ಟೆ ಬಳಿ ಮಟ್ಕಾ ಆಡಿಸುತ್ತಿದ್ದ ಅಂಗಡಿಕಾರ ರೋನಿ ಪ್ರಾನ್ಸಿಸ್ ಮೇಲೆ ಅದೇ ದಿನ ಪೊಲೀಸ್ ಉಪನಿರೀಕ್ಷಕ ರವಿ ಗುಡ್ಡಿ ದಾಳಿ ನಡೆಸಿ 1100ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಹೊನ್ನಾವರ ಬಂಗಾರಮಕ್ಕಿ ಬಳಿ ಅಂಗಡಿ ನಡೆಸುವ ಸುಬ್ರಹ್ಮಣ್ಯ ಗೌಡ ಸಹ ಮಟ್ಕಾ ಆಡಿಸುವ ವೇಳೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ನ 2ರಂದು ಪಿಎಸ್ಐ ರಾಜಶೇಖರ ವಂದಲಿ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 850ರೂ ಹಣ ಹಾಗೂ ಮಟ್ಕಾ ಪರಿಕ್ಕರಗಳನ್ನು ವಶಕ್ಕೆ ಪಡೆದಿದ್ದಾರೆ.




