ಯಲ್ಲಾಪುರ: ಕಿರವತ್ತಿ ತೆಂಗಿನಗೇರಿಯ ವಿಠ್ಠು ಶಿಂಧೆ ಅವರು ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಬುಲೇರೋ ಡಿಕ್ಕಿಯಾಗಿದೆ.
ಜನವರಿ 6ರಂದು ಮಹಾರಾಷ್ಟದ ಸೂರಜ್ ಯಾವಾಲೆ ಎಂಬಾತ ಅಂಕೋಲಾದಿoದ ಹುಬ್ಬಳ್ಳಿ ಕಡೆ ಬುಲೆರೋ ಓಡಿಸಿಕೊಂಡು ಹೊರಟಿದ್ದರು. ಕೋಳಿಕೇರಿ ಅರಣ್ಯ ಇಲಾಖೆ ಕ್ವಾಟರ್ಸ ಬಳಿ ಎದುರಿನಿಂದ ಬೈಕಿನಲ್ಲಿ ಬರುತ್ತಿದ್ದ ವಿಠ್ಠು ಶಿಂಧೆ ಅವರಿಗೆ ಸೂರಜ್ ಯಾವಾಲೆ ಬುಲೆರೋ ಗುದ್ದಿದರು. ಪರಿಣಾಮ ವಿಠ್ಠು ಶಿಂಧೆ ಅವರ ಜೊತೆಗಿದ್ದ ಬಾಬು ಪಟಗಾರೆ ಸಹ ಗಾಯಗೊಂಡರು.
ಈ ಅಪಘಾತದ ಬಗ್ಗೆ ವಿಠ್ಠು ಶಿಂಧೆ ಅವರ ಮಗ ಕೋಯಾ ಶಿಂಧೆ ಪೊಲೀಸ್ ದೂರು ನೀಡಿದ್ದಾರೆ. ಪಿಎಸ್ಐ ನಸ್ರೀನ್ತಾಜ್ ಚಟ್ಟರಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಬೈಕಿಗೆ ಗುದ್ದಿದ ಕಾರು
ಯಲ್ಲಾಪುರ: ಹಳಿಯಾಳದಿಂದ ಯಲ್ಲಾಪುರ ಕಡೆ ಬರುತ್ತಿದ್ದ ಕಾರು ಡೌಗಿನಾಳ ಕ್ರಾಸಿನ ಬಳಿ ಬೈಕಿಗೆ ಗುದ್ದಿದೆ.
ಪರಿಣಾಮ ಬೈಕಿನಲ್ಲಿ ಚಲಿಸುತ್ತಿದ್ದ ಶಿರಸಿ ಗಣೇಶ ನಗರದ ಶಿವಾಜಿ ಬೋವಿವಡ್ಡರ್ ಗಾಯಗೊಂಡಿದ್ದಾರೆ. ಹಳಿಯಾಳ ಬಳಿಯ ಕೆಸರೊಳ್ಳಿ ಇನುಸ ಬಡಗಿ ಜನವರಿ 8ರಂದು ಈ ಕಾರು ಓಡಿಸುತ್ತಿದ್ದರು. ವೇಗವಾಗಿ ಮುನ್ನುಗ್ಗಿ ಬಂದ ಅವರು ಬೈಕ್ ಸವಾರನಿಗೆ ಕಾರು ಡಿಕ್ಕಿಪಡಿಸಿದರು.
ಈ ಬಗ್ಗೆ ಶ್ರೀಕಾಂತ ಬೋವಿವಡ್ಡರ್ ಪೊಲೀಸ್ ದೂರು ನೀಡಿದ್ದು, ಪಿಎಸ್ಐ ಶೇಡ್ಜಿ ಚೌಹಾಣ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.




