ಯಲ್ಲಾಪುರ: ಯಲ್ಲಾಪುರ ನ್ಯೂಸ್’ನ ಜಗದೀಶ ನಾಯ್ಕ ಅವರು ಸಾವನಪ್ಪಿ ಎರಡು ತಿಂಗಳು ಕಳೆದಿದ್ದು, ಬುಧವಾರ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಠಿಯಾಗಿದೆ!
ಸೈಬರ್ ಅಪರಾಧಿಗಳು ಜಗದೀಶ ನಾಯ್ಕ ಅವರ ಹೆಸರಿನಲ್ಲಿ ಖಾತೆ ತೆರೆದು ಹಣ ಬೇಡುತ್ತಿದ್ದಾರೆ. ಜಗದೀಶ ನಾಯ್ಕ ಅವರ ಫೋಟೋವನ್ನು ಸಹ ಇಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ.
ಜಗದೀಶ ನಾಯ್ಕ ಅವರು ಹೊಂದಿದ್ದ ಅಸಲಿ ಫೇಸ್ಬುಕ್ ಖಾತೆಯಲ್ಲಿ 4.4 ಸಾವಿರ ಸ್ನೇಹಿತರಿದ್ದರು. ಪ್ರಸ್ತುತ ಅವರ ಹೆಸರಿನಲ್ಲಿ ಹುಟ್ಟಿಕೊಂಡಿರುವ ನಕಲಿ ಖಾತೆಯಲ್ಲಿ 12 ಮಂದಿ ಸ್ನೇಹಿತರಾಗಿದ್ದಾರೆ. ಜಗದೀಶ ನಾಯ್ಕ ಅವರ ಅಸಲಿ ಖಾತೆಯ ಸಂಪರ್ಕದಲ್ಲಿರುವ ಎಲ್ಲರಿಗೂ ದುಷ್ಕರ್ಮಿಗಳು `ಪ್ರೆಂಡ್ ರಿಕ್ವೆಸ್ಟ್’ ಕಳುಹಿಸುತ್ತಿದ್ದಾರೆ.
ನಕಲಿ ಖಾತೆಯ ಬಗ್ಗೆ ಬಾಬು ಸಾಗರ್ ಎಂಬಾತರು ಜಗದೀಶ ನಾಯ್ಕ ಅವರ ಫೇಸ್ಬುಕ್ ಖಾತೆಗೆ ಟ್ಯಾಗ್ ಮಾಡಿ ವಿಷಯ ಮುಟ್ಟಿಸಿದ್ದು, ಜಗದೀಶ ಅವರ ಪುತ್ರ ಅಭಯ ನಾಯ್ಕ ಸಹ `ದುಷ್ಕರ್ಮಿಗಳು ತೆರೆದ ನಕಲಿ ಖಾತೆಗೆ ಸ್ಪಂದಿಸಬೇಡಿ’ ಎಂದು ಮನವಿ ಮಾಡಿದ್ದಾರೆ. ಜಗದೀಶ ನಾಯ್ಕ ಅವರ ಅಸಲಿ ಖಾತೆಯಿಂದ ಅಭಯ ನಾಯ್ಕ ಅವರು ಈ ಮನವಿ ಮಾಡಿದ್ದಾರೆ.




