6
  • Latest

ಪ ಪಂ ಸಭೆ: ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳ ಆಕ್ರೋಶ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ ಪಂ ಸಭೆ: ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳ ಆಕ್ರೋಶ

AchyutKumar by AchyutKumar
January 9, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಪಟ್ಟಣ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುತ್ತಿರುವ ಮುಖ್ಯಾಧಿಕಾರಿ ಸುನೀಲ ಗಾವಡೆ ವಿರುದ್ಧ ಪ ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಹೇಳಿದಾಗ ಭರವಸೆ ನೀಡಿ ನಂತರ ಅದನ್ನು ಮರೆತುಬಿಡುವ ವಿಧಾನವನ್ನು ಖಂಡಿಸಿದರು.

ಗುರುವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಪ ಪಂ ಸದಸ್ಯ ಸತೀಶ ನಾಯ್ಕ, ಸಯ್ಯದ ಕೈಸರ್, ಶ್ಯಾಮಲಿ ಪಾಠಣಕರ್ ಹಾಗೂ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಭಟ್ಟ ಬಹಿಷ್ಕರಿಸಿದರು. ಪಟ್ಟಣ ಪಂಚಾಯತ ಅಧಿಕಾರಿಗಳ ಆಡಳಿತ ವೈಖರಿ ಬಗ್ಗೆ ನಾಲ್ಕು ತಿಂಗಳಿನಿoದ ಪ್ರತಿಭಟಿಸುತ್ತಿದ್ದು, ಅವರ ನಡವಳಿಕೆಯಲ್ಲಿ ಬದಲಾವಣೆ ಆಗದ ಕಾರಣ ಸಭೆ ಬಹಿಷ್ಕರಿಸುವುದಾಗಿ ಸತೀಶ ನಾಯ್ಕ ಹೇಳಿದರು.

Advertisement. Scroll to continue reading.
ADVERTISEMENT
ADVERTISEMENT

`ಹಿತ್ಲಕಾರಗದ್ದೆಯ ದಾತ್ರಿ ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಮುನ್ನ ಆ ಲೇಔಟ್’ನ್ನು ಪಟ್ಟಣ ಪಂಚಾಯತಗೆ ಹಸ್ತಾಂತರಿಸಿಕೊಳ್ಳಲಾಗಿದೆ. ಕುಡಿಯುವ ನೀರು, ಉದ್ಯಾನವನ ಸೇರಿ ಎಲ್ಲಾ ಸೌಕರ್ಯ ಪರಿಶೀಲಿಸಿ ಲೇಔಟ್ ಹಸ್ತಾಂತರ ಮಾಡಿಕೊಳ್ಳಬೇಕಿದ್ದು ಈ ವಿಷಯದಲ್ಲಿ ಅಧಿಕಾರಿಗಳು ಎಡವಿದ್ದಾರೆ. ಪ್ರಸ್ತುತ ಅಲ್ಲಿ ವಾಸಿಸುವ ಮಂಜುನಾಥ ಭಟ್ಟ ಅವರ ಪ್ರತಿಭಟನೆ ನಂತರ ಅವರಿಗೆ ಕುಡಿಯುವ ನೀರು ಪೂರೈಸುವ ಭರವಸೆಯನ್ನು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಡಿದ್ದು, ಇದಕ್ಕೆ ಸಾರ್ವಜನಿಕ ತೆರಿಗೆ ಹಣ ವೆಚ್ಚ ಮಾಡಲು ವಿರೋಧವಿದೆ’ ಎಂದವರು ಹೇಳಿದರು.

Advertisement. Scroll to continue reading.

`ಪಟ್ಟಣ ಪಂಚಾಯತದಲ್ಲಿ ಸದಸ್ಯರ ಗಮನಕ್ಕೆ ತರದೇ ಕೆಲ ಕ್ರಿಯಾ ಯೋಜನೆಗಳನ್ನು ಮಾಡಲಾಗಿದೆ. ಯಾವ ಕೆಲಸಕ್ಕೆ ತೆರಳಿದರೂ ಇಲ್ಲಿ ನಾಳೆ ಬನ್ನಿ ಎನ್ನುತ್ತಿದ್ದು, ಪ ಪಂ ಸದಸ್ಯರಿಗೆ ಜನ ಬಯ್ಯುತ್ತಿದ್ದಾರೆ. ಶಾಸಕರು ತಕ್ಷಣ ಪಟ್ಟಣ ಪಂಚಾಯತ ಆಡಳಿತದ ಕಡೆ ಗಮನಕೊಡಬೇಕು’ ಎಂದು ಹಲವು ಸದಸ್ಯರು ಆಗ್ರಹಿಸಿದರು. ಕೆಲ ಸದಸ್ಯರು ಸಭೆ ಬಹಿಷ್ಕರಿಸಿದ ಕಾರಣ ಸಭೆಯನ್ನು ಮುಂದೂಡಲಾಯಿತು.

ShareSendTweetShare
ADVERTISEMENT
Previous Post

ಹೊಸ ವರ್ಷದ ಕೊಡುಗೆ | ನಿಮಗೂ ಸಿಕ್ಕಿತಾ ಪುಕ್ಕಟೆ ರಿಚಾರ್ಜ ಭಾಗ್ಯ?

Next Post

ಬೈಕ್ ನಡುವೆ ಡಿಕ್ಕಿ: ಒಬ್ಬ ಸಾವು.. ಇನ್ನೊಬ್ಬ ಗಂಭೀರ!

Next Post

ಬೈಕ್ ನಡುವೆ ಡಿಕ್ಕಿ: ಒಬ್ಬ ಸಾವು.. ಇನ್ನೊಬ್ಬ ಗಂಭೀರ!

ಸಮುದ್ರದಲ್ಲಿ ಮುಳುಗಿದ ದೋಣಿ!

A yoga teacher by name: What he did was intoxicating!

ವಾಸನೆ ನೋಡಿ ಗಾಂಜಾ ಗಿರಾಕಿ ಹಿಡಿದ ಪೊಲೀಸ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.