ಕುಮಟಾ: ಅಸ್ತಿತ್ವದಲ್ಲಿರದ ಸಮಿತಿಯಿಂದ ಅರಣ್ಯ ಅತಿಕ್ರಮಣದಾರರಿಗೆ ದಾಖಲೆ ಒದಗಿಸುವಂತೆ ಸೂಚನಾ ಪತ್ರ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಜ 13ರಂದು ಕುಮಟಾದಲ್ಲಿ ಸಭೆ ನಡೆಯಲಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆಯಲ್ಲಿ ಮಾಸ್ತಿಕಟ್ಟಾ ಸಂಭಾಗಣದಲ್ಲಿ ಜರುಗಿದ ತಾಲೂಕಾ ಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಕುಮಟ ಉಪವಿಭಾಗ ಅರಣ್ಯ ಹಕ್ಕು ಸಮಿತಿ ಮತ್ತು ಗ್ರಾಮ ಅರಣ್ಯ ಹಕ್ಕು ಸಮಿತಿ ಮೂರು ತಲೆಮಾರಿನ ಧೃಡಿಕೃತ ದಾಖಲೆ ಕೇಳುತ್ತಿರುವ ಬಗ್ಗೆ ಆಕ್ಷೇಪಿಸುವುದಕ್ಕಾಗಿ ಈ ಸಭೆ ನಡೆಸಲಾಗುತ್ತಿದೆ.
ಮಾಸ್ತಿಕಟ್ಟಾ ಸಂಭಾಗಣದಲ್ಲಿ ಜರುಗಿದ ತಾಲೂಕಾ ಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಪ್ರಮುಖರಾದ ಇಬ್ರಾಹಿಂ ಗೌಡಳ್ಳಿ, ಮಹೇಂದ್ರ ನಾಯ್ಕ ಕತಗಾಲ, ರಾಜು ನರೇಬೈಲ್ ಅರವಿಂದ ಗೌಡ, ಸೀತರಾಮ ನಾಯ್ಕ ಬುಗರಿಬೈಲ್, ಸಾರಾಂಬಿ ಬೆಟ್ಕುಳಿ, ಯಾಕುಬ ಸಾಬ ಬೆಟ್ಕುಳಿ, ಜಗದೀಶ ಹರಿಕಾಂತ ನುಶಿಕೋಟೆ, ಸುನೀತಾ ಹರಿಕಾಂತ ಕಿಮಾನಿ, ಶಂಕರ ಗೌಡ ಕಂದವಳ್ಳಿ ಇದ್ದರು.




