ಕಾರವಾರ: ಸಹ್ಯಾದ್ರಿ ಇಕೋ ಕ್ಲಬ್ ಚಟುವಟಿಕೆಯ ಭಾಗವಾಗಿ ನಗೆ ಶಾಲೆಯ ಮಕ್ಕಳು ಸಿದ್ಧರಾಮೇಶ್ವರ ದೇವಸ್ಥಾನದ ತಪ್ಪಲಿನಲ್ಲಿರುವ ನದಿದಡದಲ್ಲಿ ಕುಳಿತು ವಿಹರಿಸಿದರು.
ಅಲ್ಲಿನ ಅರಣ್ಯ, ಪಕ್ಷಿ ಸಂಕುಲ, ಜಲಚರಗಳ ಬಗ್ಗೆ ಅಧ್ಯಯನ ನಡೆಸಿದರು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದಕ್ಕಾಗಿ ಶಾಲೆಯ ಶಿಕ್ಷಕರು ಹೊರ ಸಂಚಾರ ಆಯೋಜಿಸಿದ್ದರು. ಅರಣ್ಯದಲ್ಲಿನ ಮರ-ಗಿಡಗಳನ್ನು ಮಕ್ಕಳು ಗುರುತಿಸಿ ಅವುಗಳ ಮಹತ್ವದ ಬಗ್ಗೆ ಅರಿತುಕೊಂಡರು. ಕೆಲವರು ಮನೆಯಿಂದ ತಿಂಡಿ-ತಿನಿಸು ತೆಗೆದುಕೊಂಡು ಹೋಗಿದ್ದರು. ಇನ್ನು ಕೆಲವರು ಅಲ್ಲಿಯೇ ಅಡುಗೆ ಮಾಡಿ ಸಂಭ್ರಮಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಜಾಫರ್ ಸೈಯದ್, ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗೌಡ, ಕಾಂಚನಾ ಗೌಡ ಉಪಸ್ಥಿತರಿದ್ದರು.




