ಕಾರವಾರ: ಕವಿ, ಲೇಖಕ, ಚಿಂತಕ, ನಿರೂಪಕರಾಗಿ ಗುರುತಿಸಿಕೊಂಡಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ಶಿಕ್ಷಕ ಗಣೇಶ ಬಿಷ್ಟಣ್ಣನವರ ಅವರಿಗೆ `ಕರ್ನಾಟಕ ಶಿಕ್ಷಣ ರತ್ನ’ ಪ್ರಶಸ್ತಿ ಸಿಕ್ಕಿದೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ `ಬೆಸ್ಟ್ ಹೈಸ್ಕೂಲ್ ಟೀಚರ್ ಕಾರವಾರ ಕ್ಯಾಟಗೇರಿ’ ಅಡಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀ ನ್ಯೂಸ್ ಹಾಗೂ ಎನ್ಹೆಲ್ಪ ಗ್ರುಪ್ ಸಹಯೋಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ 68 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಶಿವಗಂಗಾ ಮಠದ ಶಿವಯೋಗಿ ಮಹಾಸ್ವಾಮೀಜಿ, ಎನ್ಹೆಲ್ಪ ಗ್ರುಪ್ ವ್ಯವಸ್ಥಾಪಕ ನಿರ್ದೇಶಕ ಫಯಾಜ್ ಖಾನ್, ಚಿತ್ರ ನಿರ್ದೇಶಕ ಸುನಿಲಕುಮಾರ ದೇಸಾಯಿ,ಗೀತೆ ರಚನೆಕಾರ ನಾಗೇಂದ್ರ ಪ್ರಸಾದ ಇತರರು ಈ ಕಾರ್ಯಕ್ರಮದಲ್ಲಿದ್ದರು.




