ಶಿರಸಿ: ಭ್ರಷ್ಟಾಚಾರ, ಕಳಪೆ ಕಾಮಗಾರಿ, ಸರ್ಕಾರಿ ಅಧಿಕಾರಿ-ಸಿಬ್ಬಂದಿ ಕರ್ತವ್ಯ ಲೋಪದ ದೂರು ಆಲಿಸಲು ಜನವರಿ 16ರಂದು ಶಿರಸಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸುತ್ತಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಕಚೇರಿಯಲ್ಲಿರಲಿದ್ದಾರೆ. ಸಾರ್ವಜನಿಕ ಕೆಲಸ ಮಾಡಿಕೊಡಲು ಸತಾಯಿಸುವವರ ವಿರುದ್ಧ ಜನ ಲೋಕಾಯುಕ್ತರಿಗೆ ದೂರು ಕೊಡಬಹುದು. ಲಂಚ ಬೇಡಿಕೆ, ಅರ್ಜಿ ವಿಲೇವಾರಿಗೆ ಅನಗತ್ಯ ತೊಂದರೆ ಮಾಡುತ್ತಿರುವವರ ಬಗ್ಗೆಯೂ ದೂರು ನೀಡಬಹುದು.
ಇನ್ನೂ ಸರ್ಕಾರಿ ಹಣ ದುರುಪಯೋಗ, ಅಧಿಕಾರಿಗಳ ಕರ್ತವ್ಯಲೋಪ ಮೊದಲಾದ ಗಂಭೀರ ಪ್ರಕರಣಗಳಿದ್ದರೆ ನಮೂನೆ 1 ಹಾಗೂ 2ನ್ನು ಭರ್ತಿ ಮಾಡಿ ಸಲ್ಲಿಸಲು ಅವಕಾಶವಿದ್ದು, ಈ ಅರ್ಜಿಗಳು ಲೋಕಾಯುಕ್ತರ ಬಳಿ ಸಿಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ: 08382- 295293, 220198, 222250, 222022, 229988.




