ಯಲ್ಲಾಪುರ: ಹಿರಿಯ ವಿದ್ಯಾಂಸ, ಖ್ಯಾತ ಜ್ಯೋತಿಷಿ, ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದ ಭರಣಿ ನಾಗೇಂದ್ರ ಭಟ್ಟ ಅವರು ಶುಕ್ರವಾರ ಸಂಜೆ ಈ ಲೋಕದ ಯಾತ್ರೆ ಮುಗಿಸಿದ್ದಾರೆ.
94 ವರ್ಷಗಳ ಕಾಲ ತಪ್ಪಸ್ವಿಯ ರೀತಿ ಜೀವನ ನಡೆಸಿದ ಅವರು ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ನಾಗೇಂದ್ರ ಭಟ್ಟ ಅವರು ಉಮ್ಮಚಗಿ ಗ್ರಾ ಪಂ ವ್ಯಾಪ್ತಿಯ ಭರತನಹಳ್ಳಿಯ ಬಹುತೇಕ ಮನೆಗಳ ಕುಲಪುರೋಹಿತರಾಗಿದ್ದರು.
ವೈದಿಕ, ಸಂಸ್ಕೃತ, ಜ್ಯೋತಿಷ್ಯ ವಿಷಯದಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಹೊರ ಜಿಲ್ಲೆ-ಹೊರ ರಾಜ್ಯಗಳಲ್ಲಿ ಸಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಪ್ರಸಿದ್ಧಿ ಪಡೆದಿದ್ದರು. ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದ ಅವರು 25 ವರ್ಷಗಳ ಹಿಂದೆ ಭರಣಿಯಲ್ಲಿ ಭೂಮಿ ಖರೀದಿಸಿ ಅಲ್ಲಿ ವಾಸ್ತವ್ಯ ಮಾಡಿದ್ದರು. ಹೀಗಾಗಿ ಭರಣಿ ನಾಗೇಂದ್ರ ಭಟ್ಟರು ಎಂದು ಅವರು ಹೆಸರು ಪಡೆದಿದ್ದರು.




