ಸಿದ್ದಾಪುರ: ಸ್ನೇಹಿತರ ಜೊತೆ ತಂಗಿ ಮನೆಗೆ ಹೊರಟಿದ್ದ ಚಂದ್ರಶೇಖರ ನಾಯ್ಕ ಅವರಿಗೆ ರಸ್ತೆ ಪಕ್ಕ ರಕ್ತ ಗೋಚರಿಸಿದ್ದು, ಅದನ್ನು ಬೆನ್ನತ್ತಿ ಹೋದಾಗ ರಕ್ತದ ಮಡವಿನಲ್ಲಿ ಬಿದ್ದ ವ್ಯಕ್ತಿಯ ಶವ ಕಾಣಿಸಿದೆ.
ಮಾವಿನಗುಂಡಿ ಬಸವನಬೈಲಿನ ಚಂದ್ರಶೇಖರ ನಾಯ್ಕ ಅವರು ಜನವರಿ 14ರ ರಾತ್ರಿ 10.30ಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಮೆಟ್ಟಿನಗದ್ದೆಯಲ್ಲಿರುವ ಅವರ ತಂಗಿ ಮನೆಗೆ ತೆರಳುತ್ತಿರುವಾಗ ಮಲೆಮನೆ ರಸ್ತೆಯಂಚಿನಲ್ಲಿ ಅವರಿಗೆ ರಕ್ತ ಕಾಣಿಸಿತು. ಕಾರಿನಲ್ಲಿದ್ದ ಸ್ನೇಹಿತರ ಜೊತೆ ಅವರು ಸುತ್ತಲು ಹುಡುಕಾಟ ನಡೆಸಿದರು.
ಆಗ, ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ ಅಂಚಿನಲ್ಲಿ ಬಿದ್ದಿರುವುದು ಗೋಚರಿಸಿತು. ಆತನ ಹತ್ತಿರ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದು ಆತ ಸಾವನಪ್ಪಿರುವುದು ಗೊತ್ತಾಯಿತು. ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿ ಪರಾರಿಯಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು. ಅಪಘಾತದ ಪರಿಣಾಮ ಆತ ಸಾವನಪ್ಪಿರುವ ಅನುಮಾನದ ಹಿನ್ನಲೆ ಪೊಲೀಸ್ ಪ್ರಕರಣ ದಾಖಲಿಸಿದರು.





